alex Certify ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ ಆಡಳಿತ ಪಕ್ಷದ ಶಾಸಕ, ಅಸಮರ್ಥರನ್ನು ಕೂಡಲೇ ಬದಲಿಸಬೇಕೆಂದು ಒತ್ತಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ ಆಡಳಿತ ಪಕ್ಷದ ಶಾಸಕ, ಅಸಮರ್ಥರನ್ನು ಕೂಡಲೇ ಬದಲಿಸಬೇಕೆಂದು ಒತ್ತಾಯ

ಬೆಂಗಳೂರು: ವಿಧಾನಸೌಧಕ್ಕೆ ಬಂದರೂ ಸಚಿವರು ಸಿಗುವುದಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಅಸಮಾಧಾನ ಹೊರಹಾಕಿದ್ದಾರೆ. ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು, ಶಾಸಕರ ಕೈಗೆ ಸಚಿವರು ಸಿಗುತ್ತಿಲ್ಲ ಎಂದು ಗರಂ ಆಗಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ವಾರಕ್ಕೆ ಎರಡು ಸಲ ವಿಧಾನಸೌಧಕ್ಕೆ ಬಂದು ಶಾಸಕರ ಭೇಟಿಗೆ ಸಿಗುತ್ತಾರೆ. ಸಮಸ್ಯೆಯನ್ನೂ ಆಲಿಸುತ್ತಾರೆ. ಆದರೆ, ಸಚಿವರನ್ನು ಭೇಟಿಯಾಗುವುದೇ ಕಷ್ಟಸಾಧ್ಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಸಕರ ಸಮಸ್ಯೆಗಳ ನಿವಾರಣೆಗೆ ಸಚಿವರನ್ನು ಭೇಟಿಯಾಗಲು ಬಂದರೆ ಸಚಿವರೇ ಸಿಗುವುದಿಲ್ಲ. ಶಾಸಕರದೇ ಈ ರೀತಿಯಾದರೆ ಜನಸಾಮಾನ್ಯರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. ಅಸಮರ್ಥ ಸಚಿವರನ್ನು ಕೂಡಲೇ ಬದಲಿಸಬೇಕೆಂದು ಅವರು ಒತ್ತಾಯಿಸಿದ್ದು, ಮುಖ್ಯಮಂತ್ರಿಗಳೇ ವಿಧಾನಸೌಧಕ್ಕೆ ಬಂದರೂ ಅನೇಕ ಸಚಿವರು ವಿಧಾನಸೌಧಕ್ಕೆ ಬಂದು ಶಾಸಕರ ಸಮಸ್ಯೆ ಆಲಿಸುತ್ತಿಲ್ಲ ಎಂದು ದೂರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...