alex Certify ಬಿಎಸ್​ವೈಗೆ ವಯಸ್ಸಾಯ್ತು ಎಂದ ಹೆಚ್​.ವಿಶ್ವನಾಥ್​ ವಿರುದ್ಧ ರೇಣುಕಾಚಾರ್ಯ ಕೆಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಸ್​ವೈಗೆ ವಯಸ್ಸಾಯ್ತು ಎಂದ ಹೆಚ್​.ವಿಶ್ವನಾಥ್​ ವಿರುದ್ಧ ರೇಣುಕಾಚಾರ್ಯ ಕೆಂಡ

ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕುತ್ತಾ ಬಂದಿರುವ ಹೆಚ್​. ವಿಶ್ವನಾಥ್​ ಇದೀಗ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಸೂಕ್ತವಲ್ಲ ಎಂದು ಹೈಕಮಾಂಡ್​ಗೆ ಮಾಹಿತಿ ನೀಡಿದ್ದಾರೆ,. ಯಡಿಯೂರಪ್ಪಗೆ ವಯಸ್ಸಾಗಿದ್ದು ರಾಜ್ಯದ ಏಳ್ಗೆಗಾಗಿ ಶ್ರಮಿಸುವ ಪವರ್​ ಹಾಗೂ ಸ್ಪಿರಿಟ್​ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡಿರುವ ಹೆಚ್​. ವಿಶ್ವನಾಥ್​ ವಿರುದ್ಧ ಶಾಸಕ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಶಾಸಕ ಎಂಪಿ ರೇಣುಕಾಚಾರ್ಯ, ಸಿಎಂ ಯಡಿಯೂರಪ್ಪರ ವಯಸ್ಸನ್ನ ಪ್ರಶ್ನೆ ಮಾಡೋ ವಿಶ್ವನಾಥ್​ ನಿಮ್ಮ ವಯಸ್ಸೆಷ್ಟು ಅನ್ನೋದು ನೆನಪಿದೆಯಾ..? ಬಿಜೆಪಿಯ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ಏನಿದೆ..? ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷಕ್ಕೆ ಮೋಸ ಮಾಡಿದವರು ನೀವು. ಕಾಂಗ್ರೆಸ್​ ನಿಮಗೆ ಎಲ್ಲಾ ಅಧಿಕಾರ ನೀಡಿದ್ರೂ ಅಲ್ಲಿಂದ ಹೊರ ಬಂದಿರಿ, ಜೆಡಿಎಸ್​ ರಾಜ್ಯಾಧ್ಯಕ್ಷನ ಸ್ಥಾನ ನೀಡಿದರೂ ಸಹ ದೇವೇಗೌಡರಿಗೆ ಮೋಸ ಮಾಡಿದ್ದೀರಾ. ಇದೀಗ ಯಡಿಯೂರಪ್ಪ ವಿರುದ್ಧ ಮಾತನಾಡುತ್ತಿದ್ದೀರಾ. ತಾನಿದ್ದ ಪಕ್ಷದ ವಿರುದ್ಧ ಮಾತನಾಡೋದೇ ಹೆಚ್​.ವಿಶ್ವನಾಥ್​ ಕೆಲಸ ಎಂದು ಗುಡುಗಿದ್ರು.

ವಲಸಿಗ ಸಚಿವರು ಯಡಿಯೂರಪ್ಪರ ಪರವಾಗಿ ಇದ್ದಾರೆ. ಆದರೆ ಸೋತ ವಿಶ್ವನಾಥ್​​ರನ್ನ ಯಡಿಯೂರಪ್ಪರೇ ಎಂಎಲ್​ಸಿ ಮಾಡಿದ್ದರೂ ಸಹ ವಿಶ್ವನಾಥ್​ ಅವರ ವಿರುದ್ಧವೇ ಮಾತನಾಡ್ತಾರೆ. ಇವರು ತಮಗೆ ಮಂತ್ರಿಗಿರಿ ಸಿಕ್ಕಿಲ್ಲ ಎಂದು ಹತಾಶರಾಗಿದ್ದಾರೆ. ಸಿಎಂರನ್ನ ಆಯ್ಕೆ ಮಾಡೋದು ಶಾಸಕರೇ ಹೊರತು ಎಂಎಲ್​ಸಿಗಳಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...