alex Certify ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಬಾಲಕನ ನಾಲಗೆಯೇ ಕಟ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳದಲ್ಲಿ ಬಾಲಕನ ನಾಲಗೆಯೇ ಕಟ್​…..!

ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳವು ಹಿಂಸಾತ್ಮಕ ರೂಪ ಪಡೆದ ಪರಿಣಾಮ 12 ವರ್ಷದ ಬಾಲಕನ ನಾಲಗೆಯನ್ನು ಪಕ್ಕದ ಮನೆಯವು ಕತ್ತರಿಸಿದ ಭಯಾನಕ ಘಟನೆಯು ಉತ್ತರ ಪ್ರದೇಶದ ಬುಲಂದ್​ಶಹರ್​ನ ಖುರ್ಚಾ ಎಂಬಲ್ಲಿ ನಡೆದಿದೆ.

ಇಬ್ಬರು ಬಾಲಕರ ನಡುವೆ ಜಗಳ ನಡೆಯುತ್ತಿತ್ತು. ಸ್ವಲ್ಪ ಸಮಯದ ಬಳಿಕ ಈ ಜಗಳದಲ್ಲಿ ಕುಟುಂಬಸ್ಥರೂ ಭಾಗಿಯಾಗಿದ್ದರಿಂದ ಇದು ಹಿಂಸಾತ್ಮಕ ರೂಪ ಪಡೆದುಕೊಂಡಿದೆ.

ಮೊದಲು ಮಾತಿನ ಜಟಾಪಟಿಯಲ್ಲೇ ಇದ್ದ ಈ ಜಗಳ ಕ್ರಮೇಣ ಕೈ ಕೈ ಮಿಲಾಯಿಸುವವರೆಗೂ ತಲುಪಿದೆ. ಕೊನೆಗೆ ಓರ್ವ ಬಾಲಕನ ನಾಲಗಯನ್ನೇ ಕತ್ತರಿಸಲಾಗಿದೆ. ಮತ್ತೊಬ್ಬ ಬಾಲಕನನ್ನು ತಳ್ಳಲಾಗಿದ್ದು ಆತನ ತಲೆಗೆ ಗಾಯವಾಗಿದೆ.

ಬಾಯಿಯಲ್ಲಿ ಗಾಯವಾಗಿದ್ದರೂ ಸಹ ಕಷ್ಟಪಟ್ಟು ಮಾತನಾಡಿದ ಅಪ್ರಾಪ್ತ ಬಾಲಕ, ಈ ಘಟನೆಯಲ್ಲಿ ನನ್ನ ತಪ್ಪು ಏನೂ ಇರಲಿಲ್ಲ. ನನ್ನ ಪಕ್ಕದ ಮನೆಯವರಾದ ಕುಲದೀಪ್​ ಹಾಗೂ ಸಚಿನ್​ ಸ್ನೇಹಿತರ ಜೊತೆ ಸೇರಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾನೆ.

ಈ ಸಂಬಂಧ ಮೂವರ ವಿರುದ್ಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತಲೆಮರೆಸಿಕೊಂಡಿರುವ ಇನ್ನಿಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ನಾಲಗೆ ಕತ್ತರಿಸಿ ಹೋದ ಬಾಲಕನಿಗೆ ಶಸ್ತ್ರಚಿಕಿತ್ಸೆ ಮುಂದುವರಿದಿದೆ. ತಲೆಗೆ ಗಾಯವಾದ ಬಾಲಕನನ್ನು ಪ್ರಥಮ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...