alex Certify BIG NEWS: ಸೊಪ್ಪು, ತರಕಾರಿಗಳನ್ನು ಕಾಲಿನಿಂದ ಒದ್ದ ಪಿಎಸ್ ಐ; ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಸೊಪ್ಪು, ತರಕಾರಿಗಳನ್ನು ಕಾಲಿನಿಂದ ಒದ್ದ ಪಿಎಸ್ ಐ; ಬೀದಿಬದಿ ವ್ಯಾಪಾರಿಗಳ ಮೇಲೆ ಪೊಲೀಸಪ್ಪನ ದರ್ಪ

ರಾಯಚೂರು: ಸೊಪ್ಪು, ತರಕಾರಿಗಳನ್ನು ಕಾಲಿನಿಂದ ಒದ್ದು, ಬೀದಿಬದಿ ವ್ಯಾಪಾರಸ್ಥರ ಮೇಲೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಓರ್ವರು ದರ್ಪ ಮೆರೆದಿರುವ ಘಟನೆ ರಾಯಚೂರಿನಲ್ಲಿ ಬೆಳಕಿಗೆ ಬಂದಿದೆ.

ರಾಯಚೂರಿನ ಚಂದ್ರಮೌಳೇಶ್ವರ ವೃತ್ತದಲ್ಲಿ ಕೆಲ ಮಹಿಳೆಯರು ತರಕಾರಿ, ಸೊಪ್ಪುಗಳನ್ನು ರಸ್ತೆಬದಿಯಿಟ್ಟು ಮಾರಾಟ ಮಾಡುತ್ತಿದ್ದರು. ಏಕಾಏಕಿ ಸ್ಥಳಕ್ಕೆ ಆಗಮಿಸಿದ ಸದರ್ ಬಜಾರ್ ಠಾಣೆ ಪಿಎಸ್ ಐ ಅಜಂ ತರಕಾರಿ, ಸೊಪ್ಪು, ನಿಂಬೆ ಹಣ್ಣಿನ ಬುಟ್ಟಿಗಳನ್ನು ಕಾಲಿನಿಂದ ಒದ್ದು, ತರಕಾರಿಗಳನ್ನು ಚಲ್ಲಾಪಿಲ್ಲಿಗೊಳಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಕೊರೊನಾ ಲಾಕ್ ಡೌನ್ ನಿಂದಾಗಿ ಈಗಾಗಲೇ ಬೀದಿಬದಿ ವ್ಯಾಪಾಸ್ತರ ಬದುಕು ದುಸ್ಥರವಾಗಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹೊತ್ತಿನ ಊಟಕ್ಕಾಗಿ ತರಕಾರಿ ಮಾರುತ್ತಿದ್ದ ಬಡವರ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...