alex Certify ಮತ್ತೆ ಕಾಂಗ್ರೆಸ್​ ಸೇರುವ ಮಾತೇ ಇಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಎ. ಮಂಜು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮತ್ತೆ ಕಾಂಗ್ರೆಸ್​ ಸೇರುವ ಮಾತೇ ಇಲ್ಲ: ಊಹಾಪೋಹಗಳಿಗೆ ತೆರೆ ಎಳೆದ ಎ. ಮಂಜು

ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ತ್ಯಜಿಸಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ. ಮಂಜು ಪುನಃ ಕಾಂಗ್ರೆಸ್​ ಪಕ್ಷಕ್ಕೆ ವಾಪಸ್ಸಾಗಲಿದ್ದಾರೆ ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬೆಂಬಲಿಗರ ಮೂಲಕ ಮತ್ತೆ ಕಾಂಗ್ರೆಸ್​ ಸೇರ್ಪಡೆಗೆ ಮಂಜು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಗಳ ನಡುವೆಯೇ ಎಲ್ಲಾ ವದಂತಿಗಳಿಗೆ ಸ್ವತಃ ಮಂಜು ತೆರೆ ಎಳೆದಿದ್ದಾರೆ.

ಹಾಸನದಲ್ಲಿ ಈ ವಿಚಾರವಾಗಿ ಮಾತನಾಡಿದ ಅವ್ರು, ಈ ರೀತಿಯ ಯಾವುದೇ ವಿಚಾರವೂ ನನ್ನ ಮುಂದೆ ಇಲ್ಲ. ಮಂಜು ಆಲ್ವೇಸ್​ ಎ ಮಂಜು. ನನ್ನ ಬಗ್ಗೆ ನಾನೇ ತೀರ್ಮಾನ ಮಾಡಬೇಕು. ಬೇರೆಯವರು ಹೇಳಿದ್ರೆ ಹೇಗೆ..? ಜಿಲ್ಲೆ ಜನ ನನ್ನನ್ನ ನೋಡಿ 6 ಲಕ್ಷ ಮತ ನೀಡಿದ್ದಾರೆ. ನಾನು ಯಾರನ್ನೂ ಬಿಜೆಪಿಗೆ ಸೇರ್ಪಡೆ ಮಾಡಿಲ್ಲ. ನನ್ನ ಸ್ವಂತ ಬಲದಿಂದ ಸ್ಪರ್ಧೆಗೆ ನಿಂತಿದ್ದೆ. ಬ್ಯಾಡ್​ ಲಕ್​ನಿಂದಾಗಿ ಸೋತು ಹೋದೆ. ಈಗ ನಮ್ಮದೇ ಸರ್ಕಾರ ಅಧಿಕಾರದಲ್ಲಿ ಇದೆ. ಪ್ರಧಾನಿ ಮೋದಿ ಅವರ ಪರವಾಗಿ ನಾನು ಇರುತ್ತೇನೆ ಎಂದು ಹೇಳಿದ್ದಾರೆ.

ಎ. ಮಂಜು ಈ ಹಿಂದೆ ಕೂಡ ಕಾಂಗ್ರೆಸ್​ ಸೇರುವ ವದಂತಿಯನ್ನ ಅಲ್ಲಗಳೆದಿದ್ದಾರೆ. ಆದರೆ ಶನಿವಾರ ಮಂಜು ಬೆಂಬಲಿಗರು ಡಿ.ಕೆ. ಶಿವಕುಮಾರ್​ರನ್ನ ಭೇಟಿ ಮಾಡಿಯೋದು ಸಾಕಷ್ಟು ಊಹಾಪೋಹಗಳಿಗೆ ಕಾರಣವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...