alex Certify BREAKING: ಆಸ್ಸಾಂ ರೈಫಲ್ಸ್ ಘಟಕದ ಮೇಲೆ ಭಯೋತ್ಪಾದಕರ ದಾಳಿ..! ಆರಕ್ಕೂ ಅಧಿಕ ಯೋಧರು ಹುತಾತ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಆಸ್ಸಾಂ ರೈಫಲ್ಸ್ ಘಟಕದ ಮೇಲೆ ಭಯೋತ್ಪಾದಕರ ದಾಳಿ..! ಆರಕ್ಕೂ ಅಧಿಕ ಯೋಧರು ಹುತಾತ್ಮ

ಮಣಿಪುರದ ಚುರಾಚಂದ್​ ಜಿಲ್ಲೆಯ ಸಿಂಘತ್​ ಉಪವಿಭಾಗದಲ್ಲಿರುವ ಆಸ್ಸಾಂ ರೈಫಲ್ಸ್ ಘಟಕದ ಕಮಾಂಡಿಂಗ್​ ಆಫೀಸರ್​ರ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದು, ಇದರಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಆಸ್ಸಾಂ ರೈಫಲ್ಸ್​ ಕಮಾಂಡಿಂಗ್​ ಅಧಿಕಾರಿಯ ಬೆಂಗಾವಲು ಪಡೆಯ ಮೇಲೆ ಸಿಂಘಾತ್​ ಉಪನಗರದಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ದಾಳಿ ನಡೆಸುವ ವೇಳೆಯಲ್ಲಿ ಅಧಿಕಾರಿಯು ತನ್ನ ಕುಟುಂಬಸ್ಥರು ಹಾಗೂ ಕ್ವಿಕ್​ ರಿಯಾಕ್ಷನ್ ತಂಡದ ಜೊತೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.

ಭಯೋತ್ಪಾದಕರ ಈ ದಾಳಿಯನ್ನು ಮಣಿಪುರ ಸಿಎಂ ನೊಂಗ್ತೊಂಬಮ್​ ಬಿರೇನ್​ ಸಿಂಗ್​ ಕಟುವಾಗಿ ಟೀಕಿಸಿದ್ದಾರೆ. ಭಯೋತ್ಪಾದಕರ ಈ ಹೇಡಿ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದೂ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಶೀಘ್ರದಲ್ಲೇ ಕ್ರಮ ಜರುಗಿಸುವ ಬಗ್ಗೆ ಅಭಯ ನೀಡಿದ್ದಾರೆ.

ಇದೊಂದು ಅಮಾನವೀಯ ಭಯೋತ್ಪಾದಕ ಕೃತ್ಯವಾಗಿದ್ದು, ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಮೌನವಾಗಿರಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...