alex Certify ‘ಬೈಕ್ ಕಲಿಸಲು‌ ಶಿಕ್ಷಕ ಬೇಕು, ಮಿಥುನ ರಾಶಿಯಾಗಿರಬಾರದು, ಅವಮಾನ ಮಾಡಬಾರದು……‘ ಹೀಗೊಂದು ಜಾಹೀರಾತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಬೈಕ್ ಕಲಿಸಲು‌ ಶಿಕ್ಷಕ ಬೇಕು, ಮಿಥುನ ರಾಶಿಯಾಗಿರಬಾರದು, ಅವಮಾನ ಮಾಡಬಾರದು……‘ ಹೀಗೊಂದು ಜಾಹೀರಾತು

ಇಂದಿನ ದಿನಗಳಲ್ಲಿ ಜನರು ನೆಟ್‌ವರ್ಕಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ಖಾಲಿ ಹುದ್ದೆಗಳನ್ನು ಪೋಸ್ಟ್ ಮಾಡುವುದು ಸಾಮಾನ್ಯವಾಗಿದೆ. ಆದರೆ ಈಗ ಇದರಲ್ಲಿ ಹಾಕಿರುವ ಪೋಸ್ಟ್‌ ಒಂದು ವೈರಲ್‌ ಆಗಿದೆ.

ಇದಕ್ಕೆ ಕಾರಣ, ವ್ಯಕ್ತಿಯೊಬ್ಬ ಪತ್ರಿಕೆಯ 10ನೇ ಪುಟದಲ್ಲಿ ಬರುವ ಜಾಹೀರಾತನ್ನು ಹಾಕಿದ್ದಾನೆ. ಈ ಜಾಹೀರಾತಿನಲ್ಲಿ ಬೈಕ್ ಶಿಕ್ಷಕರನ್ನು ಹುಡುಕುತ್ತಿರುವುದಾಗಿ ಹೇಳಲಾಗಿದೆ. ಇಷ್ಟೇ ಆಗಿದ್ದರೆ ಇದು ಸುದ್ದಿಯಾಗುತ್ತಿರಲಿಲ್ಲ.

ಬದಲಿಗೆ ಈ ಜಾಹೀರಾತಿನಲ್ಲಿ ಹೇಳಿರುವ ಅಂಶಗಳು ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ. ಅದೇನೆಂದರೆ ಬೈಕ್‌ ಶಿಕ್ಷಕ ಸಭ್ಯರಾಗಿರಬೇಕು ಎಂದು ಜಾಹೀರಾತಿನಲ್ಲಿ ಹೇಳಲಾಗಿದ್ದು, ಅವರು ಮಿಥುನ ರಾಶಿ ಆಗಿರಬಾರದು ಎಂದು ಹೇಳಲಾಗಿದೆ.

“ನನ್ನ ಹೆಸರು ಪ್ರವೀಣ್‌ಭಾಯ್ ಸುದಾನಿ, ನನಗೆ ಬೈಕ್ ಓಡಿಸಲು ಕಲಿಸಲು ಬೋಧಕನ ಅಗತ್ಯವಿದೆ. ಅವನು ಸಭ್ಯನಾಗಿರಬೇಕು. ಏಕೆಂದರೆ ನನಗೆ ಅವಮಾನ ಆಗಬಾರದು. ಅವಮಾನ ಆಗಲೇಬೇಕು ಎಂದುಕೊಂಡಿದ್ದರೆ ನನ್ನ ತಂದೆಯೇ ಬೈಕ್‌ ಕಲಿಸಲು ಹೇಳುತ್ತಿದ್ದೆ. ಅಷ್ಟೇ ಅಲ್ಲದೇ ಶಿಕ್ಷಕ ಮಿಥುನ ರಾಶಿಯಾಗಬಾರದು. ನನ್ನ ಬೈಕ್ ಜಾವಾ ಬಾಬರ್ ಆಗಿದೆ. ಸಿಆರ್‌ಇಡಿ ಸ್ಟೋರ್‌ನಲ್ಲಿ ಬಿಡ್‌ಬ್ಲಾಸ್ಟ್ ಆಡುವ ಮೂಲಕ ನಾನು ಗೆದ್ದಿದ್ದೇನೆ. ಸುಖಾಸುಮ್ಮನೆ ಹೆಚ್ಚು ಹಣ ಕೇಳಬೇಡಿ ” ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಇದಕ್ಕೆ ಥರಹೇವಾರಿ ಕಮೆಂಟ್‌ಗಳು ಬರುತ್ತಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...