alex Certify ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖನಾದವನು ಬಳಿಕ ನೇಣಿಗೆ ಶರಣು; ಮನನೊಂದು ಆತ್ಮಹತ್ಯೆ ಮಾಡಿಕೊಂಡ ಪೋಷಕರು

ಸೂರತ್: ಕೆಲವೇ ದಿನಗಳ ಮುನ್ನ ಕೊರೊನಾ ಸೋಂಕಿನಿಂದ ಗುಣಮುಖನಾಗಿದ್ದ ನವಸಾರಿ ಜಿಲ್ಲೆಯ 31ರ ಯುವಕನೊಬ್ಬ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಇದನ್ನು ಕಂಡ ಆತನ ಪೋಷಕರು ಕೂಡ ನೇಣಿಗೆ ಕೊರಳೊಡ್ಡಿ ಮೃತಪಟ್ಟಿದ್ದಾರೆ. ಕಳೆದ ಏಪ್ರಿಲ್‍ನಲ್ಲೇ ಮೂರು ಬಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್: ಸೆ. 10 ರ ವರೆಗೆ ಇ-ಕೆವೈಸಿ ಅವಧಿ ವಿಸ್ತರಣೆ

ಯುವಕನಿಗೆ ಪತ್ನಿ ಮತ್ತು 3 ವರ್ಷದ ಮಗಳು ಇದ್ದಾಳೆ. ಆತ ನೇಣಿಗೇರುವ ಕೆಲವೇ ಗಂಟೆಗಳ ಮುನ್ನ ಪತ್ನಿ, ಪುತ್ರಿ ಇಬ್ಬರೂ ಸಮೀಪದಲ್ಲಿನ ತಾಯಿ ಮನೆಗೆ ರಕ್ಷಾಬಂಧನ ಆಚರಣೆಗಾಗಿ ತೆರಳಿದ್ದರು ಎನ್ನಲಾಗಿದೆ.

ಯುವಕನ ದುಡುಕುತನದ ಹೆಜ್ಜೆಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂಬ ಕೊರಗಿನಿಂದಾಗಿ ಪೋಷಕರು, ನೊಂದುಕೊಂಡು ನೇಣಿಗೆ ಕೊರಳು ಒಡ್ಡಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...