alex Certify SHOCKING: ಮೆಸೇಜ್ ಮಾಡಿಲ್ಲ ಅನ್ನೋ ಕಾರಣಕ್ಕೆ ಶೂಟ್‌ ಮಾಡಿದ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮೆಸೇಜ್ ಮಾಡಿಲ್ಲ ಅನ್ನೋ ಕಾರಣಕ್ಕೆ ಶೂಟ್‌ ಮಾಡಿದ ಯುವಕ….!

ಸೋಶಿಯಲ್ ಮೀಡಿಯಾದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿ, ಆ ನಂತರ ಪ್ರೀತಿಗೆ ತಿರುಗಿ ತದನಂತರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಅದೆಷ್ಟೋ ನಡೆದಿವೆ. ಈಗ ದೆಹಲಿಯಲ್ಲೂ ತನ್ನ ಹುಡುಗಿ ತನಗೆ ಮೆಸೇಜ್‌ ಮಾಡುತ್ತಿಲ್ಲ ಅನ್ನೊ ಕಾರಣಕ್ಕೆ ಯುವಕ ಶೂಟ್‌ ಮಾಡಿದ್ದಾನೆ.

ಸೋಶಿಯಲ್ ಮೀಡಿಯಾದಲ್ಲಿ ಜಗತ್ತಿನ ಯಾವ ಮೂಲೆಯಲ್ಲಿದ್ದವರು ಸಹ ಪರಿಚಯವಾಗಿ ಬಿಡುತ್ತಾರೆ. ದೆಹಲಿಯ 16 ವರ್ಷದ ಯುವತಿಗೂ ಎರಡು ವರ್ಷದ ಹಿಂದೆ ಅರ್ಮಾನ್ ಅನ್ನುವ ಯುವಕ ಪರಿಚಯವಾಗಿರುತ್ತಾನೆ. ಮೊದಲು ಹಾಯ್, ಹಲೋ ದಿಂದ ಆದ ಪರಿಚಯ ಕೊನೆಗೆ ಗಂಟೆಗಟ್ಟೆಲೆ ಮಾತುಕತೆಯ ತನಕ ಬೆಳೆದಿದೆ. ಆದರೆ ಕಳೆದ ಆರು ತಿಂಗಳಿನಿಂದ ಆಕೆ ಆತನ ಜೊತೆ ಮಾತನಾಡುವುದನ್ನ ನಿಲ್ಲಿಸಿದ್ದಾಳೆ. ಆತನ ಸಂದೇಶಗಳಿಗೆ ಪ್ರತಿಕ್ರಿಯಿಸುವುದನ್ನ ನಿಲ್ಲಿಸಿದ್ದಾಳೆ. ಇದೇ ಕಾರಣ ಇಟ್ಟುಕೊಂಡು ಮೂವರು ವ್ಯಕ್ತಿಗಳು ಆಕೆಯ ಮೇಲೆ ಗುಂಡು ಹಾರಿಸಿ ಆಕೆಯನ್ನ ಕೊಲ್ಲುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ.

ಆಕೆಯ ಮೇಲೆ ದಾಳಿ ಮಾಡಿದವರ ಪೈಕಿ ಇಬ್ಬರನ್ನ, ಅಂದರೆ ಬಾಬಿ ಮತ್ತು ಪವನ್ ಇವರನ್ನ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ, ಎಂದು ಪೊಲೀಸರು ಮಾಧ್ಯಮದ ಮುಂದೆ ಹೇಳಿದ್ಧಾರೆ.

ಸದ್ಯ ಪ್ರಮುಖ ಆರೋಪಿ ಅರ್ಮಾನ್ ಅಲಿ ಪರಾರಿಯಾಗಿದ್ದು, ಆತನನ್ನು ಪತ್ತೆಹಚ್ಚಲು ಪೊಲೀಸರು ಮಾಹಿತಿದಾರರ ಸಹಾಯವನ್ನು ಪಡೆಯುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹನ್ನೊಂದನೇ ತರಗತಿ ಓದುತ್ತಿರುವ 16 ವರ್ಷದ ಬಾಲಕಿ ದಕ್ಷಿಣ ದೆಹಲಿಯ ಸಂಗಮ್ ವಿಹಾರ್ ಪ್ರದೇಶದಲ್ಲಿ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಆಕೆಯ ಮೇಲೆ ಗುಂಡು ಹಾರಿಸಲಾಗಿದೆ. ಸಂತ್ರಸ್ತೆಗೆ ಭುಜದ ಮೇಲೆ ಗಾಯವಾಗಿದ್ದು, ಅಪಾಯದಿಂದ ಪಾರಾಗಿದ್ದಾಳೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳು ಬಾಲಕಿಯ ಮೇಲೆ ಹಿಂದಿನಿಂದ ಗುಂಡು ಹಾರಿಸಿ ಓಡಿ ಹೋಗಿದ್ದಾರೆ. ಅವರ ವಿರುದ್ಧ ಕೊಲೆ ಯತ್ನದ ಪ್ರಕರಣವನ್ನು ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...