alex Certify ತಮ್ಮ ಕಚೇರಿಯಲ್ಲಿ ಬಾಳಾ ಠಾಕ್ರೆ, ಆನಂದ್​ ದಿಘೆ ಚಿತ್ರವಿಟ್ಟು ಅಧಿಕಾರ ಸ್ವೀಕರಿಸಿದ ಶಿಂಧೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಮ್ಮ ಕಚೇರಿಯಲ್ಲಿ ಬಾಳಾ ಠಾಕ್ರೆ, ಆನಂದ್​ ದಿಘೆ ಚಿತ್ರವಿಟ್ಟು ಅಧಿಕಾರ ಸ್ವೀಕರಿಸಿದ ಶಿಂಧೆ

ಮಹಾರಾಷ್ಟ್ರ ರಾಜಕೀಯ ಹೈಡ್ರಾಮ ಒಂದು ಹಂತ ತಲುಪಿದೆ. ಮೋದಿ‌ & ಷಾ ಜೋಡಿಗೆ ಸೆಡ್ಡು ಹೊಡೆದು ಮುಖ್ಯಮಂತ್ರಿಯಾಗಿದ್ದ ಉದ್ಧವ್​ ಠಾಕ್ರೆಗೆ ತಿರುಗೇಟು ನೀಡಿ ಅವರದೇ ಪಕ್ಷದ ಶಾಸಕರನ್ನು ತಿರುಗಿ ಬೀಳುವಂತೆ ಮಾಡಿ, ಶಿವಸೇನೆಗೆ ಅಧಿಕಾರ ಕೊಟ್ಟು ಶಾಕ್​ ನೀಡಲಾಗಿದೆ.

ಇದೀಗ ಏಕನಾಥ್​ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಬಳಿಕ ತಮಗೆ ಮೀಸಲಾದ ಕಚೇರಿಯಲ್ಲಿ ಕೆಲಸ ಆರಂಭಿಸಿದ್ದಾರೆ. ಗುರುವಾರ ಅವರು ರಾಜ್ಯ ಸಚಿವಾಲಯ ಮಂತ್ರಾಲಯದಲ್ಲಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

BREAKING: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ, ಅಪಘಾತದಲ್ಲಿ 8 ಪ್ರಯಾಣಿಕರಿಗೆ ಗಾಯ

ಶಿಂಧೆ ಅಧಿಕಾರ ಸ್ವೀಕರಿಸುವ ಮುನ್ನ ಅಲಂಕರಿಸಿದ ಮುಖ್ಯಮಂತ್ರಿ ಕಚೇರಿಯಲ್ಲಿ ಪೂಜೆ ನಡೆಯಿತು. ಅವರ ಕೊಠಡಿಯಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾ ಠಾಕ್ರೆ​ ಅವರ ದೊಡ್ಡ ಛಾಯಾಚಿತ್ರ ಮತ್ತು ಅದರ ಪಕ್ಕದಲ್ಲಿ ಶಿಂಧೆ ಅವರ ಆಪ್ತ ಆನಂದ್​ ದಿಘೆ ಅವರ ಚಿತ್ರವಿತ್ತು.

ಸಚಿವಾಲಯದ ಕಟ್ಟಡ ಪ್ರವೇಶಿಸಿದ ತಕ್ಷಣ ಅವರು ಛತ್ರಪತಿ ಶಿವಾಜಿ ಮಹಾರಾಜ್​ ಮತ್ತು ಡಾ ಬಿ.ಆರ್.​ ಅಂಬೇಡ್ಕರ್​ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಬಾಳಾ ಠಾಕ್ರೆ ಫೋಟೋ ಬಳಕೆಗೆ ಉದ್ಧವ್​ ಬಣ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಆಕ್ಷೇಪಕ್ಕೆ ಶಿಂಧೆ ನೇತೃತ್ವದ ಶಾಸಕರ ಬಣದ ವಕ್ತಾರ ದೀಪಕ್​ ಕೇಸರ್ಕರ್​ ತಿರುಗೇಟು ನೀಡಿದ್ದಾರೆ. ಬಾಳಾ ಠಾಕ್ರೆ ಯಾರ ಸ್ವತ್ತಲ್ಲ. ಬಾಳಾ ಸಾಹೇಬ್​ ಅವರು ಇಡೀ ರಾಜ್ಯಕ್ಕೆ ಸೇರಿದವರು ಮತ್ತು ಈ ಸತ್ಯವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಸಂಸದ ರಾವತ್‌,​ ಶರದ್​ ಪವಾರ್​ಗೆ ಹತ್ತಿರ ಎಂದು ಟೀಕಿಸಿದ ಅವರು ಲೋಕಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕ ಭಾವನಾ ಗವಾಲಿ ಅವರನ್ನು ಬದಲಿಸುವ ಉದ್ಧವ್​ ಠಾಕ್ರೆ ನೇತೃತ್ವದ ಶಿವಸೇನೆಯ ನಿರ್ಧಾರವನ್ನು ಕೇಸರ್ಕರ್​ ಟೀಕಿಸಿದರು. ಇಂತಹ ಕ್ರಮದಿಂದ ನೀವು ಮಹಿಳೆಯರನ್ನು ಅವಮಾನಿಸುತ್ತೀದ್ದಿರಿ. ಅವರು ಐದು ಬಾರಿ ಸಂಸದರಾಗಿದ್ದಾರೆ, ಅವರು ಶಿವಸೇನೆ ಧ್ವಜವನ್ನು ಎತ್ತರಕ್ಕೆ ಹಿಡಿದಿದ್ದಾರೆ ಎಂದು ಹೇಳಿದರು. ಲೋಕಸಭೆಯಲ್ಲಿ ಗವಾಲಿ ಬದಲಿಗೆ ಬುಧವಾರ ಉದ್ಧವ್​ ಠಾಕ್ರೆ ನೇತೃತ್ವದ ಬಣವು ರಾಜನ್​ ವಿಚಾರೆಯನ್ನು ಪಕ್ಷದ ಮುಖ್ಯ ಸಚೇತಕರನ್ನಾಗಿ ನಾಮನಿರ್ದೇಶನ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...