alex Certify ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಭಕ್ತರಿಗಾಗಿ ಕೋವಿಡ್​ ಲಸಿಕೆ ಅಭಿಯಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಜ್ಜಯಿನಿ ಮಹಾಕಾಳೇಶ್ವರ ದೇಗುಲದಲ್ಲಿ ಭಕ್ತರಿಗಾಗಿ ಕೋವಿಡ್​ ಲಸಿಕೆ ಅಭಿಯಾನ

ಮಧ್ಯಪ್ರದೇಶದ ಉಜ್ಜಿಯಿನಿಯ ಮಹಾಕಾಳೇಶ್ವರ ದೇಗುಲದ ಆವರಣದಲ್ಲಿ ಭಕ್ತರಿಗಾಗಿ ಕೋವಿಡ್​ ಲಸಿಕೆ ಅಭಿಯಾನವನ್ನು ನಡೆಸುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡಲು ಬಯಸಿದ ಭಕ್ತರಿಗೆ ಬೇರೆಡೆ ಕೋವಿಡ್​ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗದೇ ಹೋದಲ್ಲಿ ದೇಗುಲದ ಆವರಣದಲ್ಲೇ ಲಸಿಕೆಯನ್ನು ಪಡೆಯಬಹುದಾಗಿದೆ. ಈ ಲಸಿಕಾ ಅಭಿಯಾನಕ್ಕೆ ಸೆಪ್ಟೆಂಬರ್​ 15ರಿಂದ ಚಾಲನೆ ದೊರಕಿದೆ. ಭಕ್ತಾದಿಗಳು ತಮ್ಮ ಮೊದಲ ಹಾಗೂ 2ನೇ ಡೋಸ್​ನ್ನು ಇಲ್ಲಿಯೇ ಪಡೆಯಬಹುದಾಗಿದೆ.‌

ಕೋವಿಡ್​ 19ನಿಂದಾಗಿ ಬರೋಬ್ಬರಿ 17 ತಿಂಗಳುಗಳ ಕಾಲ ಬಂದ್​ ಆಗಿದ್ದ ಮಹಾಕಾಳೇಶ್ವರ ದೇಗುಲವು ಸೆಪ್ಟೆಂಬರ್​ 11ರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಸೆಪ್ಟೆಂಬರ್​ 11ರಂದು ನಡೆದು ಭಸ್ಮ ಆರತಿಯಲ್ಲಿ 686 ಭಕ್ತರು ಭಾಗಿಯಾಗಿದ್ದರು. ಇವರೆಲ್ಲ ಕೋವಿಡ್​ 19 ಮಾರ್ಗಸೂಚಿಗಳನ್ನು ಪಾಲಿಸಿಯೇ ಭಸ್ಮ ಆರತಿಯಲ್ಲಿ ಭಾಗಿಯಾಗಿದ್ದರು.

ಉಜ್ಜಯಿನಿಯ ಮಹಾಕೇಶ್ವರ ದೇಗುಲವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ ಹಾಗೂ ಹಿಂದೂಗಳ ಪ್ರಸಿದ್ಧ ಪುಣ್ಯಕ್ಷೇತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...