alex Certify BREAKING NEWS: ಮೊದಲ ಅಗ್ನಿಪರೀಕ್ಷೆ ಗೆದ್ದ ಏಕನಾಥ ಶಿಂಧೆ, ರಾಹುಲ್ ನಾರ್ವೆಕರ್ ನೂತನ ಸ್ಪೀಕರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING NEWS: ಮೊದಲ ಅಗ್ನಿಪರೀಕ್ಷೆ ಗೆದ್ದ ಏಕನಾಥ ಶಿಂಧೆ, ರಾಹುಲ್ ನಾರ್ವೆಕರ್ ನೂತನ ಸ್ಪೀಕರ್

ಮುಂಬೈ: ಮಹಾರಾಷ್ಟ್ರದ ನೂತನ ಸ್ಪೀಕರ್ ಆಯ್ಕೆಗೆ ನಡೆದ ಚುನಾವಣೆಯಲ್ಲಿ ರಾಹುಲ್ ನಾರ್ವೇಕರ್ ಆಯ್ಕೆಯಾಗಿದ್ದಾರೆ. 164 ಮತಗಳನ್ನು ಪಡೆದ ಬಿಜೆಪಿ ಹಾಗೂ ಶಿಂಧೆ ಬಣದ ನಾರ್ವೆಕರ್ ಜಯಗಳಿಸಿದ್ದಾರೆ.

ಇದರೊಂದಿಗೆ ಮೊದಲ ಅಗ್ನಿ ಪರೀಕ್ಷೆಯಲ್ಲಿ ಏಕನಾಥ ಶಿಂಧೆ ಜಯಗಳಿಸಿದ್ದು, ಮಹಾವಿಕಾಸ ಅಘಾಡಿಯ ರಾಜನ್ ಸಾಳ್ವೆ ಸೋಲು ಕಂಡಿದ್ದಾರೆ. ನಾಳೆ ಏಕನಾಥಶಿಂಧೆ ಅವರಿಗೆ ಅಗ್ನಿ ಪರೀಕ್ಷೆ ಇದ್ದು, ಸದನದಲ್ಲಿ ಬಹುಮತ ಸಾಬೀತುಪಡಿಸಬೇಕಿದೆ.

ಈಗಾಗಲೇ 164 ಶಾಸಕರ ಬಲ ಹೊಂದಿರುವುದು ಸ್ಪೀಕರ್ ಚುನಾವನೆಯಲ್ಲಿ ಸಾಬೀತಾಗಿರುವುದರಿಂದ ಶಿಂಧೆ ವಿಶ್ವಾಸಮತ ಯಾಚನೆಯಲ್ಲಿ ಜಯಗಳಿಸುವುದು ನಿಶ್ಚಿತವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...