alex Certify ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೈವೈಯಲ್ಲಿ ಐಷಾರಾಮಿ ಕಾರಿಗೆ ಬೆಂಕಿ; ನೆರವಿಗೆ ಧಾವಿಸಿದ ಸಿಎಂ ಶಿಂಧೆ ವಿಡಿಯೋ ವೈರಲ್

ಮಹಾರಾಷ್ಟ್ರದ ಪಶ್ಚಿಮ ಎಕ್ಸ್ ಪ್ರೆಸ್ ಹೈವೇಯಲ್ಲಿ ಮಂಗಳವಾರ ಮುಂಜಾನೆ ಐಷಾರಾಮಿ ಕಾರಿಗೆ ಏಕಾಏಕಿ ಬೆಂಕಿ ತಗುಲಿದ್ದು, ಇದೇ ವೇಳೆ ಅದೇ ಹಾದಿಯಲ್ಲಿ ಸಾಗುತ್ತಿದ್ದ ಮುಖ್ಯಮಂತ್ರಿ, ಏಕನಾಥ್ ಶಿಂಧೆ ತಮ್ಮ ಕಾರು ನಿಲ್ಲಿಸಿ ನೆರವಿಗೆ ಧಾವಿಸಿದ ಘಟನೆ ನಡೆದಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅವರು ಬೆಂಗಾವಲು ಪಡೆ ಇದೇ ಹಾದಿಯಲ್ಲಿ ಹೋಗುತ್ತಿದ್ದಾಗ ಮತ್ತೊಂದು ಕಾರಿಗೆ ಬೆಂಕಿ ತಗುಲಿರುವುದನ್ನು ಗಮನಿಸಿದ್ದಾರೆ. ಕೂಡಲೇ ವಾಹನ ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಜೊತೆಗೆ ಮುಖ್ಯಮಂತ್ರಿಗಳ ಬೆಂಗಾವಲು ಸಿಬ್ಬಂದಿ ಅಗ್ನಿಶಾಮಕ ಪಡೆಗೆ ಕರೆ ಮಾಡಿದ್ದು, ಅವರು ಬರುವಷ್ಟರಲ್ಲೇ ಕಾರು ಸುಟ್ಟು ಕರಕಲಾಗಿದೆ. ಬಳಿಕ ಕಾರು ಚಾಲಕನೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ನಿಮಗೆ ಏನಾದರೂ ಅಪಾಯ ಸಂಭವಿಸಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಕಾರಿಗಿಂತ ಜೀವ ಮುಖ್ಯ ಎಂದು ಹೇಳಿದ್ದಾರೆ. ಕಾರು ಸುಟ್ಟು ಕರಕಲಾಗಿದ್ದರೂ ಸಹ ಅದೃಷ್ಟವಶಾತ್ ಅದರಲ್ಲಿ ಇದ್ದವರಿಗೆ ಯಾವುದೇ ಹಾನಿ ಸಂಭವಿಸಿಲ್ಲ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...