alex Certify ಲಿಂಗಾಯತ ಧರ್ಮದ ಬಗ್ಗೆ ಎಂ.ಬಿ. ಪಾಟೀಲ್ ಹೇಳಿಕೆಗೆ ಶಾಮನೂರು ಶಿವಶಂಕರಪ್ಪ ತಿರುಗೇಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಂಗಾಯತ ಧರ್ಮದ ಬಗ್ಗೆ ಎಂ.ಬಿ. ಪಾಟೀಲ್ ಹೇಳಿಕೆಗೆ ಶಾಮನೂರು ಶಿವಶಂಕರಪ್ಪ ತಿರುಗೇಟು

ಪ್ರತ್ಯೇಕ ಲಿಂಗಾಯತ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ.ಬಿ. ಪಾಟೀಲ್, ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋರಾಟ ಮಾಡುತ್ತೇವೆ ಎಂದು ಹೇಳಿಕೆ ನೀಡಿದ್ದಕ್ಕೆ ಶಾಸಕ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ.

ಅವನೇನು ಒಟ್ಟಿಗೆ ಕರೆದೊಯ್ಯುತ್ತಾನೆ ಅವನ ಹಣೆಬರಹ. ಲಿಂಗಾಯತರಲ್ಲಿ ಯಾವುದೇ ಉಪ ಜಾತಿಯಿಲ್ಲ. ಎಲ್ಲರೂ ಒಂದೇ. ಸಾಧು ಲಿಮಗಾಯಿತರು, ಬಣಜಿಗರು, ಪಂಚಾಚಾರ್ಯರು ಎಲ್ಲರನ್ನು ವೀರಶೈವರು ಎಂದು ಪರಿಗಣನೆ ಮಾಡುತ್ತೇವೆ. ಹೋರಾಟ ಮಾಡುವವರು ಮಾಡಲಿ ಮತ್ತೆ ತಣ್ಣಗಾಗುತ್ತಾರೆ ಎಂದು ಶಾಮನೂರು ಹೇಳಿದ್ದಾರೆ.

ಎಂ.ಬಿ. ಪಾಟೀಲ್ ಏನೇ ಹೇಳಿಕೆ ನೀಡಿದರೂ ನಮ್ಮ ನಿಲುವು ಒಂದೇ. ವೀರಶೈವ ಲಿಂಗಾಯತ ಒಂದೇ ಎಂಬ ನಿರಾಣಿ ಹೇಳಿಕೆ ಸರಿ. ಲಿಂಗಾಯತ ನಾಯಕ ಆಗಬೇಕೆಂದು ಬಹಳ ಜನರು ಪ್ರಯತ್ನ ನಡೆಸಿದ್ದಾರೆ. ಆದರೆ ಜನ ಎಂ.ಬಿ. ಪಾಟೀಲ್ ಅವರನ್ನು ನಾಯಕನಾಗಿ ಮಾಡಬೇಕು. ನಾನಾಗಿಯೇ ನಾಯಕನಾಗುತ್ತೇನೆ ಎಂದು ಹೋದರೆ ಆಗುತ್ತಾ? ಎಂ.ಬಿ. ಪಾಟೀಲ್ ಮೊದಲು ಊರಲ್ಲಿ ಗೆದ್ದು ಬರಲಿ ಎಂದು ಸ್ವಪಕ್ಷದ ನಾಯಕನ ವಿರುದ್ಧವೇ ಶಾಮನೂರು ಗುಡುಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...