alex Certify ‘ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ’ : ಸಿಎಂ ಸಿದ್ದರಾಮಯ್ಯ ಕಂಬನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ’ : ಸಿಎಂ ಸಿದ್ದರಾಮಯ್ಯ ಕಂಬನಿ

ಬೆಂಗಳೂರು : ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ ಲೀಲಾವತಿ ಎಂದು ಸಿಎಂ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

ಲೀಲಾವತಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಬಳಿಕ ಸಿಎಂ ಸಿದ್ದರಾಮಯ್ಯ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಂಬನಿಹಿರಿಯ ನಟಿ ಲೀಲಾವತಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದೆ.ನನ್ನ ವಿದ್ಯಾರ್ಥಿ ಜೀವನದಲ್ಲಿ ಲೀಲಾವತಿಯವರ ಚಲನಚಿತ್ರಗಳನ್ನು ನೋಡಿಕೊಂಡು ಬೆಳೆದವನು. ತನಗೆ ವಹಿಸುವ ಪ್ರತಿ ಪಾತ್ರಕ್ಕೂ ಜೀವತುಂಬುತ್ತಿದ್ದ ಓರ್ವ ಪರಿಪೂರ್ಣ ಕಲಾವಿದೆ. ಇಂದಿಗೂ ಅವರ ನಟನೆ ನನ್ನ ಕಣ್ಣೆದುರೇ ಇದ್ದಂತಿದೆ.

ನಟನೆಯ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ತಾವು ಗಳಿಸಿದ ಹಣದಲ್ಲಿ ನೂರಾರು ಜೀವಗಳಿಗೆ ನೆರವಾದ ಹೃದಯವಂತೆ. ದಯೆಯೇ ಧರ್ಮದ ಮೂಲವಯ್ಯ ಎಂಬ ಮಾತನ್ನು ತಮ್ಮ ಬದುಕಿನಲ್ಲಿ ಯಥಾವತ್ತು ಅಳವಡಿಸಿಕೊಂಡಿದ್ದ ಲೀಲಾವತಿ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ವಿನೋದ್ ರಾಜ್ ಅವರಿಗೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಭಾವುಕ  ಪೋಸ್ಟ್  ಹಂಚಿಕೊಂಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...