alex Certify ಬಿಜೆಪಿ – ಶಿವಸೇನೆ ಸಂಬಂಧವನ್ನು ಅಮೀರ್‌ – ಕಿರಣ್‌ ವಿಚ್ಚೇದನಕ್ಕೆ ಹೋಲಿಸಿದ ಸಂಜಯ್​ ರಾವತ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿ – ಶಿವಸೇನೆ ಸಂಬಂಧವನ್ನು ಅಮೀರ್‌ – ಕಿರಣ್‌ ವಿಚ್ಚೇದನಕ್ಕೆ ಹೋಲಿಸಿದ ಸಂಜಯ್​ ರಾವತ್

ಶಿವಸೇನಾ ನಾಯಕ ಸಂಜಯ್​ ರಾವತ್​​ ಬಿಜೆಪಿ ಹಾಗೂ ಶಿವಸೇನೆಯ ನಡುವಿನ ಸಂಬಂಧವನ್ನ ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಕಿರಣ್​​ ರಾವ್​ ನಡುವಿನ ಸಂಬಂಧಕ್ಕೆ ಹೋಲಿಕೆ ಮಾಡಿದ್ದಾರೆ. ಮಾಜಿ ಮಿತ್ರ ಪಕ್ಷ ಬಿಜೆಪಿ ಹಾಗೂ ಶಿವಸೇನೆ ನಡುವಿನ ಸಂಬಂಧ ಭಾರತ- ಪಾಕಿಸ್ತಾನ ನಡುವಿನ ಸಂಬಂಧದಂತಿಲ್ಲ. ಬದಲಾಗಿ ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ಸಂಬಂಧದಂತೆ ಇದೆ ಎಂದು ಹೇಳಿದ್ದಾರೆ.

ನಾವು ಭಾರತ – ಪಾಕಿಸ್ತಾನದವರಲ್ಲ. ಥೇಟ್​ ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ನಡುವಿನ ಸಂಬಂಧದಂತೆ. ನಮ್ಮ ರಾಜಕೀಯ ಚಿಂತನೆಗಳು ಭಿನ್ನ ಹಾಗಂತ ನಮ್ಮ ನಡುವಿನ ಸ್ನೇಹ ಮೊದಲಿನಂತೆ ಇದೆ ಎಂದು ಹೇಳಿದ್ರು.

ಬಾಲಿವುಡ್​ ನಟ ಆಮೀರ್​ ಖಾನ್​ ಹಾಗೂ ಕಿರಣ್​ ರಾವ್​ ದಂಪತಿ ಶನಿವಾರ ತಮ್ಮ ಸುದೀರ್ಘ 15 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ನಾವು ಇನ್ಮೇಲೆ ಪತಿ – ಪತ್ನಿಯಲ್ಲ ಆದರೆ ನಾವು ಪೋಷಕರು ಹಾಗೂ ಒಂದೇ ಕುಟುಂಬದವರು ಎಂದು ಹೇಳಿಕೊಂಡಿದ್ದರು.

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​​ ನಮ್ಮ ಹಾಗೂ ಶಿವಸೇನೆಯ ನಡುವೆ ದ್ವೇಷತ್ವವಿಲ್ಲ. ಕೆಲವೊಂದು ವಿಚಾರಗಳಲ್ಲಿ ಮಾತ್ರ ಭಿನ್ನಾಭಿಪ್ರಾಯ ಇದೆ ಅಷ್ಟೇ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ರಾವತ್​ ಈ ರೀತಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...