alex Certify ಮೊಬೈಲ್ ​ನೆಟ್​ವರ್ಕ್​ಗಾಗಿ ಮರವೇರಿದ್ದ ಬಾಲಕ ಸಿಡಿಲು ಬಡಿದು ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ​ನೆಟ್​ವರ್ಕ್​ಗಾಗಿ ಮರವೇರಿದ್ದ ಬಾಲಕ ಸಿಡಿಲು ಬಡಿದು ಸಾವು

ಮೊಬೈಲ್​ ನೆಟ್​ವರ್ಕ್​ ಸಿಗೋದಿಲ್ಲ ಎಂಬ ಕಾರಣಕ್ಕೆ ಮರವೇರಿದ್ದ 15 ವರ್ಷದ ಬಾಲಕನ ಮೇಲೆ ಸಿಡಿಲೆರಗಿದ ಪರಿಣಾಮ ಆತ ಸಾವನ್ನಪಿದ ಘಟನೆ ಮಹಾರಾಷ್ಟ್ರದ ಪಾಲ್ಘರ್​​ ಜಿಲ್ಲೆಯಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಇನ್ನು ಮೂವರು ಬಾಲಕರು ಗಾಯಗೊಡಿದ್ದಾರೆ ಎನ್ನಲಾಗಿದೆ.

ಸೋಮವಾರ ಸಂಜೆ ಸುಮಾರಿಗೆ ದಹನು ತಾಲೂಕಿನ ಮಂಕರ್​ಪಾಡ ಎಂಬಲ್ಲಿ ನಾಲ್ವರು ಬಾಲಕರು ಜಾನುವಾರುಗಳನ್ನ ಮೇಯಿಸಲು ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಹಶೀಲ್ದಾರ್​ ರಾಹುಲ್​ ಸಾರಂಗ್​ ಹೇಳಿದ್ರು.

ಮಹಾರಾಷ್ಟ್ರ ಜಿಲ್ಲೆಯಲ್ಲಿ ಸೋಮವಾರ ಗುಡುಗು ಮಿಂಚಿನ ಸಮೇತ ಭಾರೀ ಮಳೆಯಾಗಿದೆ. ಮಳೆಯಿಂದಾಗಿ ನೆಟ್​ವರ್ಕ್​ ಸರಿಯಾಗಿ ಸಿಗುತ್ತಿಲ್ಲ ಎಂಬ ಕಾರಣಕ್ಕೆ ಬಾಲಕ ಮೊಬೈಲ್​ ಹಿಡಿದು ಮರವೇರಿದ್ದ ಎನ್ನಲಾಗಿದೆ.

ಮೃತ ಬಾಲಕನನ್ನ 15 ವರ್ಷದ ರವೀಂದ್ರ ಕೋರ್ದಾ ಎಂದು ಗುರುತಿಸಲಾಗಿದೆ. ಗಾಯಗೊಂಡ ಇನ್ನುಳಿದ ಬಾಲಕರು ಸಹ 14 ರಿಂದ 16 ವರ್ಷ ಪ್ರಾಯದವರಾಗಿದ್ದು ಇವರನ್ನ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...