alex Certify ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡ ಯುವಕ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡ ಯುವಕ….!

ಇಂದಿನ ದಿನಗಳಲ್ಲಿ ಮದುವೆಗೆ ಕನ್ಯೆ ಸಿಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಮದುವೆ ಮಾಡಿಕೊಡಲು ಹೆತ್ತವರು ಹಿಂದೇಟು ಹಾಕುವ ಕಾರಣ ರೈತಾಪಿ ಯುವಕರು ಮದುವೆಯಾಗುವುದು ತಡವಾಗುತ್ತಿದೆ.

ಇದರ ಮಧ್ಯೆ ವಿಜಯನಗರ ಜಿಲ್ಲೆಯ ಯುವಕನೊಬ್ಬ ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡಿದ್ದಾನೆ.

ಹೌದು, ಚಿಮ್ಮನಹಳ್ಳಿಯ ಯುವಕ ದುರ್ಗಾಂಬಿಕೆಗೆ ಹರಕೆ ತೀರಿಸಿದ್ದು ಬಾಳೆಹಣ್ಣಿನ ಮೇಲೆ ‘ಜನರ ಮನಸ್ಸು ಬದಲಾಗಲಿ’, ‘ರೈತರಿಗೆ ಕನ್ಯ ಕೊಡಲಿ’ ಎಂದು ಬರೆದಿದ್ದಾನೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯ ದುರ್ಗಾಂಬಿಕೆ ರಥೋತ್ಸವದಲ್ಲಿ ಈ ಯುವಕ ಹರಕೆಯ ಬರಹವಿದ್ದ ಬಾಳೆಹಣ್ಣನ್ನು ಸಮರ್ಪಿಸಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...