alex Certify ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ, ರಾತ್ರಿಯೆಲ್ಲ ರಸ್ತೆಯಲ್ಲೇ ಜಾಗರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಗೂಢ ಶಬ್ಧಕ್ಕೆ ಬೆಚ್ಚಿಬಿದ್ದ ಜನ, ರಾತ್ರಿಯೆಲ್ಲ ರಸ್ತೆಯಲ್ಲೇ ಜಾಗರಣೆ

ವಿಜಯಪುರ: ನಿಗೂಢ ಶಬ್ದಕ್ಕೆ ವಿಜಯಪುರ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ತಡರಾತ್ರಿ ವಿಜಯನಗರ ಜಿಲ್ಲೆಯ ಹಲವೆಡೆ ಭೂಮಿಯಿಂದ ನಿಗೂಢ ಸದ್ದು ಕೇಳಿಬಂದು ಆತಂಕ ಮೂಡಿಸಿದ್ದು, ರಾತ್ರಿಯಿಡೀ ಜಾಗರಣೆ ಮಾಡುತ್ತ ಜನ ಕಾಲ ಕಳೆದಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನಲ್ಲಿ ಭೂಮಿಯಲ್ಲಿ ಶಬ್ದ ಬಂದಿದೆ. ಹುಣಶಾಳ ಪಿಬಿ, ಕರಭಂಟನಾಳ ಸೇರಿ ಹಲವು ಗ್ರಾಮಗಳಲ್ಲಿ ಶಬ್ದ ಕೇಳಿ ಬಂದಿದೆ. ಭಾರೀ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವವಾಗಿದ್ದು, ಮನೆಯಿಂದ ಹೊರಗೋಡಿ ಜನ ಹೊರಗೆ ಬಂದಿದ್ದಾರೆ. ನಡುರಾತ್ರಿ ಮನೆಯಿಂದ ಹೊರಗೆ ಬಂದು ತಮಗೆ ಆದ ಅನುಭವ ಹೇಳಿಕೊಂಡಿದ್ದಾರೆ. ರಾತ್ರಿಯೆಲ್ಲ ಬೀದಿಯಲ್ಲಿ ಜಾಗರಣೆ ಮಾಡಿದ್ದಾರೆ.

ಭಾರಿ ಶಬ್ದದೊಂದಿಗೆ ಭೂಮಿ ನಡುಗಿದ ಅನುಭವ ಆಗಿದೆ ಎಂದು ಜನ ಹೇಳಿಕೊಂಡಿದ್ದು, ಭಯದಲ್ಲಿಯೇ ಕಾಲ ಕಳೆದಿದ್ದಾರೆ. ಕೆಲವು ವರ್ಷಗಳಿಂದ ತಿಕೋಟ ತಾಲೂಕಿನ ಕೆಲವು ಗ್ರಾಮಗಳಲ್ಲಿ ಭೂಮಿ ನಡಗಿದ್ದ ಅನುಭವವಾಗಿತ್ತು. ಕಳೆದ ವರ್ಷವೂ ವಿಜಯಪುರ ಜಿಲ್ಲೆಯ ಕೆಲವೆಡೆ ಭೂಮಿ ನಡುಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...