alex Certify ಬಸ್ ಕಂಡೊಡನೆ ಘೀಳಿಡುತ್ತಾ ಬಂದು ಅಡ್ಡಗಟ್ಟಿದ ಒಂಟಿಸಲಗ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಸ್ ಕಂಡೊಡನೆ ಘೀಳಿಡುತ್ತಾ ಬಂದು ಅಡ್ಡಗಟ್ಟಿದ ಒಂಟಿಸಲಗ: ಕೂದಲೆಳೆ ಅಂತರದಲ್ಲಿ ಪಾರಾದ ಪ್ರಯಾಣಿಕರು

ಮಡಿಕೇರಿ: ದೇವರಪುರ ಗ್ರಾಮದ ಬಳಿ ಒಂಟಿ ಸಲಗ ಕೆಎಸ್ಆರ್ಟಿಸಿ ಬಸ್ ಅಡ್ಡಗಟ್ಟಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಗ್ರಾಮದ ಸಮೀಪ ಘಟನೆ ನಡೆದಿದೆ.

ಇದ್ದಕ್ಕಿದ್ದಂತೆ ಸಾರಿಗೆ ಬಸ್ ಬಳಿ ಒಂಟಿಸಲಗ ಓಡಿ ಬಂದಿದೆ. ಕೆಲ ಸಮಯ ಬಸ್ ಅಡ್ಡಗಟ್ಟಿ ಸುತ್ತಲೂ ಓಡಾಡಿದೆ. ಸಲಗ ಬಸ್ ಬಳಿ ಬರುತ್ತಿದ್ದಂತೆ ಚಾಲಕ ಇಂಜಿನ್ ಆಫ್ ಮಾಡಿದ್ದಾರೆ. ಆನೆ ಹತ್ತಿರ ಬರುತ್ತಿದ್ದಂತೆ ಸೀಟ್ ನಿಂದ ಚಾಲಕ ಎದ್ದು ಬಂದಿದ್ದಾರೆ. ಬಸ್ ನಲ್ಲಿದ್ದವರೆಲ್ಲ ತಟಸ್ಥರಾಗಿದ್ದಾರೆ.

ಕೆಲ ಹೊತ್ತು ಓಡಾಡಿದ ಸಲಗ ನಂತರ ಕಾಫಿ ತೋಟದತ್ತ ಹೆಜ್ಜೆ ಹಾಕಿದ್ದು, ನಿಟ್ಟುಸಿರು ಬಿಟ್ಟ ಕೆಎಸ್ಆರ್ಟಿಸಿ ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ಅಲ್ಲಿಂದ ಪ್ರಯಾಣ ಮುಂದುವರೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...