alex Certify ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಕೋವಿಡ್ ಕುರಿತು ಅಚ್ಚರಿಯ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠ ಶ್ರೀಗಳಿಂದ ಕೋವಿಡ್ ಕುರಿತು ಅಚ್ಚರಿಯ ಭವಿಷ್ಯ

ಹಾಸನ: ಅರಸೀಕೆರೆ ತಾಲೂಕು ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ, ಮನುಷ್ಯ ಹೋಗುವಾಗಲೇ ಬಿದ್ದು ಸಾಯುವ ಕಾಲ ಬರುತ್ತದೆ ಎಂದು ಭವಿಷ್ಯ ಹೇಳಿದ್ದಾರೆ.

ಹಿಂದೆ ನೆಲಪಟ್ಟು ಎನ್ನುವ ಕಾಯಿಲೆ ಇದ್ದು, ಅದನ್ನು ರಾಹು ಎಂದು ಕರೆಯಲಾಗುತ್ತಿತ್ತು. ರಾಹು ಬಡಿದು ಹೋಗುವಾಗಲೇ ಬಿದ್ದ ಎಂದು ಹೇಳುತ್ತಿದ್ದರು. ಅಂತಹ ಕಾಯಿಲೆಗಳು ಮುಂದಿನ ದಿನಗಳಲ್ಲಿ ಬರಲಿದೆ ಎಂದು ಭವಿಷ್ಯ ಹೇಳಿದ್ದಾರೆ.

ಕೊರೋನಾ ಸಂಪೂರ್ಣ ದೂರವಾಗಲು 10 ವರ್ಷ ಬೇಕಾಗಬಹುದು. ಜೂನ್ 20 ರ ನಂತರ ಪರಿಸ್ಥಿತಿ ಸುಧಾರಿಸುತ್ತದೆ. ಎರಡು ವರ್ಷಗಳ ಹಿಂದೆ ಕಫ, ಪಿತ್ತ, ವಾತದ ಕಾಯಿಲೆ ಬಂದು ಮನುಷ್ಯರು ನರಳುತ್ತಾರೆ ಎಂದು ಹೇಳಿದ್ದೆ. ಅದು ನಿಜವಾಗಿದೆ. ಪ್ರಳಯ ಆಗಲಿದೆ ಎಂದು ತಿಳಿಸಿದ್ದೆ. ಹಿಮಾಲಯದಲ್ಲಿ ಅದು ಕೂಡ ಸಂಭವಿಸಿತು ಎಂದು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಇನ್ನೊಂದು ದೊಡ್ಡ ಅಲೆ ಬರಲಿದ್ದು, ಅದರ ಪರಿಣಾಮ ಕೆಟ್ಟದಾಗಿರಲಿದೆ. ಈಗ ಹೂಳುತ್ತಿರುವ ಹೆಣಗಳು ಆಗ ಮಾತನಾಡುತ್ತವೆ ಎಂದು ಹೇಳಿದ್ದಾರೆ. ಕುಂಭ ರಾಶಿಯಲ್ಲಿ ಮಳೆ ಹೆಚ್ಚಾಗಿದ್ದು ಶೀತ, ಕಾಯಿಲೆ ಹೆಚ್ಚಾಗಲಿದೆ. ಕಾರ್ತಿಕದವರೆಗೆ ಕೊರೋನಾ ಜೋರಾಗಿರಲಿದೆ. ಸಂಕ್ರಾಂತಿಯ ನಂತರ ವಿಶ್ವದಲ್ಲಿ ದೊಡ್ಡ ವಿಪ್ಲವ ಸಂಭವಿಸಲಿದೆ. ಸಾಮೂಹಿಕ ಸಾವು, ನೋವು ಜಾಸ್ತಿ ಆಗಲಿದೆ ಎಂದು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...