alex Certify ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ ಫೋಟೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ತಮ್ಮ ಟ್ವಿಟ್ಟರ್‌ನಲ್ಲಿ ಅಳಿವಿನಂಚಿನಲ್ಲಿರುವ ನೀಲಗಿರಿ ತಹರ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಯೋಜನೆಯನ್ನು ಘೋಷಿಸಿದ ಒಂದು ದಿನದ ನಂತರ ಇದನ್ನು ಶೇರ್‌ ಮಾಡಲಾಗಿದೆ.

ಭಾರತದ ಮೊದಲ “ದಿ ನೀಲಗಿರಿ ತಹರ್” ಯೋಜನೆಯನ್ನು ಸ್ಥಾಪಿಸಲು ಸರ್ಕಾರ ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ. ಸುಪ್ರಿಯಾ ಅವರು ತಮ್ಮ ಹಿಂದಿನ ಪೋಸ್ಟ್‌ಗಳಲ್ಲಿ, ಇದು ನಿಜವಾಗಿಯೂ ರಾಜ್ಯಕ್ಕೆ ಐತಿಹಾಸಿಕ ದಿನ ಎಂದು ಉಲ್ಲೇಖಿಸಿದ್ದಾರೆ.

“ನೀಲಗಿರಿ ತಾಹರ್ ಅನ್ನು ಸಂರಕ್ಷಿಸಲು ಮೀಸಲಾದ ಯೋಜನೆಯು ತಮಿಳುನಾಡಿನ ನಿಗೂಢ ಪ್ರಾಣಿಗೆ ಒಂದು ಸುಂದರವಾದ ಗೌರವವಾಗಿದೆ. ಧನ್ಯವಾದಗಳು ಸಿಎಂ ಎಂದು ಅವರು ಬರೆದುಕೊಂಡಿದ್ದಾರೆ.

ನೀಲಗಿರಿ ತಾಹರ್ ಅಳಿವಿನಂಚಿನಲ್ಲಿರುವ ಪರ್ವತ ಮೇಕೆ ಜಾತಿಯಾಗಿದೆ ಮತ್ತು ಇದು ತಮಿಳುನಾಡು ರಾಜ್ಯದ ಪ್ರಾಣಿಯಾಗಿದೆ. ಎರವಿಕುಲಂ ರಾಷ್ಟ್ರೀಯ ಉದ್ಯಾನವನ, ನೀಲಗಿರಿ ಬೆಟ್ಟಗಳು, ಅನೈಮಲೈ ಬೆಟ್ಟಗಳು, ಪೆರಿಯಾರ್ ರಾಷ್ಟ್ರೀಯ ಉದ್ಯಾನವನ, ಪಲ್ನಿ ಬೆಟ್ಟಗಳಲ್ಲಿ ಇದನ್ನು ಕಾಣಬಹುದು. ಭಾರತದಲ್ಲಿ ಒಟ್ಟು ನೀಲಗಿರಿ ತಹರ್‌ಗಳ ಸಂಖ್ಯೆ 2500ಕ್ಕೆ ಇಳಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...