alex Certify ‘ಖತ್ರೋಂಕೇ ಕಿಲಾಡಿ’ ವಿಜೇತರಾಗಿ ಅರ್ಜುನ್ ಬಿಜ್ಲಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಖತ್ರೋಂಕೇ ಕಿಲಾಡಿ’ ವಿಜೇತರಾಗಿ ಅರ್ಜುನ್ ಬಿಜ್ಲಾನಿ

ಜನಪ್ರಿಯ ಸಾಹಸಮಯ ರಿಯಾಲಿಟಿ ಶೋ ’ಖತ್ರೋಂಕೇ ಕಿಲಾಡಿ’ಯ 11ನೇ ಸೀಸನ್‌ನಲ್ಲಿ ವಿಜಯಿಯಾದ ಅರ್ಜುನ್ ಬಿಜ್ಲಾನಿ, ತಮ್ಮ ಗೆಲುವನ್ನು ಐದು ವರ್ಷದ ಪುತ್ರನಿಗೆ ಅರ್ಪಿಸಿದ್ದಾರೆ.

ಕಲರ್ಸ್ ವಾಹಿನಿಯ 11ನೇ ಸೀಸನ್‌ ಅನ್ನು ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ನಲ್ಲಿ ಚಿತ್ರೀಕರಿಸಲಾಗಿತ್ತು. ಚಿತ್ರ ನಿರ್ಮಾಪಕ ರೋಹಿತ್‌ ಶೆಟ್ಟಿ ಆತಿಥ್ಯ ವಹಿಸಿದ್ದ ಶೋನಲ್ಲಿ ಗೆದ್ದ ಅನುಭವ ಹಂಚಿಕೊಂಡ ಅರ್ಜುನ್, “ಶೋನಲ್ಲಿ ಗೆದ್ದಿರುವುದು ಭಾರೀ ಖುಷಿ ತಂದಿದೆ. ಕೇಪ್‌ ಟೌನ್‌ನಲ್ಲಿ ಅದೊಂದು ಸುದೀರ್ಘ ಪಯಣವಾಗಿತ್ತು. ರೋಹಿತ್‌ ಸರ್‌ ನನ್ನ ಹೆಸರನ್ನು ಘೋಷಿಸುತ್ತಲೇ ನನಗೆ ಭಾರೀ ಖುಷಿಯಾಯಿತು,” ಎಂದು ಅರ್ಜುನ್ ತಿಳಿಸಿದ್ದಾರೆ.

“ಬೇರೆಲ್ಲಕ್ಕಿಂತಲೂ ಮಗ ಅಯಾನ್‌ಗಾಗಿ ನಾನು ಇದನ್ನು ಗೆಲ್ಲಲೇಬೇಕಿತ್ತು. ನಾನು ಟ್ರೋಫಿ ಗೆಲ್ಲಬೇಕೆಂದು ಆತ ನನಗೆ ಹೇಳಿದ್ದ,” ಎಂದು 38 ವರ್ಷದ ಸಾಹಸಿಗ ತಿಳಿಸಿದ್ದಾರೆ.

ಶೋನ ಆರು ಮಂದಿ ಫೈನಲಿಸ್ಟ್‌ಗಳಲ್ಲಿ ನಟರಾದ ದಿವ್ಯಾಂಕಾ ತ್ರಿಪಾಠಿ, ಶ್ವೇತಾ ತಿವಾರಿ, ವಿಶಾಲ್ ಆದಿತ್ಯಾ ಸಿಂಗ್, ಗಾಯಕ ರಾಹುಲ್ ವೈದ್ಯ ಹಾಗೂ ಟಿವಿ ಶೋಗಳ ಖ್ಯಾತಿಯ ವರುಣ್ ಸೂದ್‌ ಸಹ ಇದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...