alex Certify ಬಿಗ್‌ ನ್ಯೂಸ್:‌ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲ ಪೋಷಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಗ್‌ ನ್ಯೂಸ್:‌ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ಮಕ್ಕಳನ್ನು ಶಾಲೆಗೆ ಕಳಿಸಲು ಸಿದ್ದರಿಲ್ಲ ಪೋಷಕರು

ರಾಜ್ಯ ಸರ್ಕಾರ ಜುಲೈನಲ್ಲಿ ಶಾಲೆ ಆರಂಭಿಸುವ ಬಗ್ಗೆ ಸೂಚನೆ ನೀಡಿದೆ. ಆದ್ರೆ ಇದಕ್ಕೆ ಆನ್ಲೈನ್ ಮೂಲಕ ಪಾಲಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಪಾಲಕರ ಸಂಘ, ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದೆ. ಕೊರೊನಾ ಸೋಂಕಿತರ ಸಂಖ್ಯೆ ಸೊನ್ನೆಯಾಗುವವರೆಗೂ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೆಂದು ಪಾಲಕರು ಹೇಳಿದ್ದಾರೆ.

ಕೊರೊನಾ ಸೋಂಕು ಸೊನ್ನೆಯಾದಲ್ಲಿ ಅಥವಾ ಇದಕ್ಕೆ ಲಸಿಕೆ ಕಂಡು ಹಿಡಿದಲ್ಲಿ ಮಾತ್ರ ನಾವು ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆಂದು ಪಾಲಕರು ಹೇಳಿದ್ದಾರೆ. ಯಾವುದೂ ಇಲ್ಲದೆ ಜುಲೈನಲ್ಲಿ ಶಾಲೆ ಆರಂಭಿಸಲು ಸರ್ಕಾರ ಮುಂದಾದರೆ ಇದು ಒಳ್ಳೆಯ ನಿರ್ಧಾರವಲ್ಲವೆಂದು ಪಾಲಕರು ಹೇಳ್ತಿದ್ದಾರೆ.

ಭಾನುವಾರ ಸಂಜೆ ವೇಳೆಗೆ ಈ ನಿರ್ಧಾರ ವಿರೋಧಿಸಿ 1,06,500 ಪಾಲಕರು ಸಹಿ ಹಾಕಿದ್ದಾರೆ. ಪಾಲಕರು ಆನ್ಲೈನ್ ಶಿಕ್ಷಣಕ್ಕೆ ಓಕೆ ಎನ್ನುತ್ತಿದ್ದಾರೆ. ಆದ್ರೆ ನಿಮ್ಹಾನ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಬದಲಾವಣೆಗೆ ಇದು ಸಮಯ. ಮಕ್ಕಳಿಗೆ ಸದ್ಯದ ಪರಿಸ್ಥಿತಿ ಶಾಲೆಗೆ ಬರಲು ಯೋಗ್ಯವಿಲ್ಲ. ಮಕ್ಕಳು ಮನೆಯಲ್ಲಿಯೇ, ಸುರಕ್ಷಿತ ವಾತಾವರಣದಲ್ಲಿ ಆನ್ಲೈನ್ ಮೂಲಕ ಸ್ನೇಹಿತರು ಹಾಗೂ ಶಿಕ್ಷಕರನ್ನು ಸಂಪರ್ಕಿಸುತ್ತಿದ್ದಾರೆ ಎಂದು ಯುರೋಕಿಡ್ಸ್ ಸಹ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಜೋದ್ ರಾಜನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...