alex Certify ಕೊರಗಜ್ಜನ ಕಾಣಿಕೆ ಡಬ್ಬಕ್ಕೆ ಅಶ್ಲೀಲ ವಸ್ತು ಹಾಕಿ ಅನಾಚಾರ: ರಕ್ತಕಾರಿ ಸತ್ತ ದುಷ್ಕರ್ಮಿ, ಮತ್ತಿಬ್ಬರು ಖಾಕಿ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರಗಜ್ಜನ ಕಾಣಿಕೆ ಡಬ್ಬಕ್ಕೆ ಅಶ್ಲೀಲ ವಸ್ತು ಹಾಕಿ ಅನಾಚಾರ: ರಕ್ತಕಾರಿ ಸತ್ತ ದುಷ್ಕರ್ಮಿ, ಮತ್ತಿಬ್ಬರು ಖಾಕಿ ವಶಕ್ಕೆ

ತುಳುನಾಡಿನ ಪ್ರಸಿದ್ಧ ಕೊರಗಜ್ಜನ ಮಹಿಮೆ ಬಗ್ಗೆ ಎಲ್ಲರಿಗೂ ತಿಳಿದಿದೆ. ಇದೀಗ ಈ ಕಾರಣಿಕ ದೈವ ಮತ್ತೊಮ್ಮೆ ತನ್ನ ಶಕ್ತಿ ಏನು ಅನ್ನೋದನ್ನ ಸಾಬೀತು ಮಾಡಿದೆ. ಕೊರಗಜ್ಜನ ಕಾಣಿಕೆ ಡಬ್ಬಕ್ಕೆ ಕಾಂಡೋಮ್​​ನಂತಹ ಅಶ್ಲೀಲ ವಸ್ತುಗಳನ್ನ ಹಾಕಿದವರು ತಕ್ಕ ಶಾಸ್ತಿಯನ್ನ ಎದುರಿಸಿದ್ದಾರೆ.

ಮಂಗಳೂರಿನ ಎಮ್ಮೆಕೆರೆಯ ಕೋಟೆದ ಬಬ್ಬುಸ್ವಾಮಿ ದೈವಸ್ಥಾನದ ಕಾಣಿಕೆ ಹುಂಡಿಯಲ್ಲಿ ದುಷ್ಕರ್ಮಿಗಳು ಕಾಂಡೋಮ್​ ಹಾಗೂ ಅಶ್ಲೀಲ ಬರಹದ ಚೀಟಿಗಳನ್ನ ಹಾಕಿದ್ದರು. ಇದರಲ್ಲಿ ಓರ್ವ ಆರೋಪಿ ಗೋಡೆಗೆ ತಲೆಯನ್ನ ಗುದ್ದಿಕೊಂಡು ರಕ್ತಕಾರಿ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಅಲ್ಲದೇ ಉಳಿದ ದುಷ್ಕರ್ಮಿಗಳಿಗೂ ಸಂಕಷ್ಟ ಶುರುವಾಗಿದ್ದು ಕೋಲದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

ಬುಧವಾರ ರಾತ್ರಿ ಎಮ್ಮೆಕೆರೆಯಲ್ಲಿ ನಡೆದ ಕೊರಗಜ್ಜ ಕೋಲದಲ್ಲಿ ದುಷ್ಕರ್ಮಿಗಳು ಎಲ್ಲಾ ತಪ್ಪನ್ನ ಹೇಳಿಕೊಂಡ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಈ ಕಿಡಿಗೇಡಿಗಳನ್ನ ಪಾಂಡೇಶ್ವರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...