alex Certify ʼಹಳದಿʼ ಬಣ್ಣದ ಕಲ್ಲಂಗಡಿ ಬೆಳೆದ ಕರ್ನಾಟಕದ ರೈತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಳದಿʼ ಬಣ್ಣದ ಕಲ್ಲಂಗಡಿ ಬೆಳೆದ ಕರ್ನಾಟಕದ ರೈತ….!

ಕರ್ನಾಟಕದ ರೈತರೊಬ್ಬರು ವೈಜ್ಞಾನಿಕ ಮಾದರಿಯಲ್ಲಿ ಹಳದಿ ಬಣ್ಣದ ಕಲ್ಲಂಗಡಿಯನ್ನ ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕೊರಲಿ ಗ್ರಾಮದ ಬಸವರಾಜ್​ ಪಾಟೀಲ್​ ಎಂಬ ಪದವೀಧರ ರೈತ, ಈ ಹಳದಿ ಬಣ್ಣದ ಕಲ್ಲಂಗಡಿ ಹಣ್ಣನ್ನು ಸ್ಥಳೀಯ ಮಾರುಕಟ್ಟೆ ಹಾಗೂ ಬಿಗ್​ ಬಜಾರ್​ನಲ್ಲಿ ಮಾರಾಟ ಮಾಡ್ತಿದ್ದಾರೆ.

ವೈಜ್ಞಾನಿಕವಾಗಿ ರೂಪಿಸಿದ ಹಳದಿ ಕಲ್ಲಂಗಡಿ ಹಣ್ಣಿನಿಂದ ಪಾಟೀಲ್​ ತುಂಬಾನೇ ಲಾಭ ಪಡೆದಿದ್ದಾರೆ. ಈ ಕಲ್ಲಂಗಡಿ ಹಣ್ಣನ್ನ ಪಡೆಯಲಿಕ್ಕಾಗಿ ಬಸವರಾಜ್​ ಪಾಟೀಲ್​ 2 ಲಕ್ಷ ರೂಪಾಯಿ ಬಂಡವಾಳ ಹೂಡಿದ್ದರು. ಈಗಾಗಲೇ ಅವರು 1 ಲಕ್ಷ ರೂಪಾಯಿ ಲಾಭವನ್ನ ಪಡೆದಿದ್ದಾರೆ.

ಈ ಹಳದಿ ಕಲ್ಲಂಗಡಿ ಹಣ್ಣುಗಳು ಕೆಂಪು ಕಲ್ಲಂಗಡಿ ಹಣ್ಣಿಗಿಂತ ಹೆಚ್ಚು ಸಿಹಿಯಾಗಿರುತ್ತದೆ ಎಂದು ಬಸವರಾಜ್​ ಪಾಟೀಲ್​ ಮಾಹಿತಿ ನೀಡಿದ್ದಾರೆ.

ನಮ್ಮ ಬೆಳೆಯನ್ನ ವಿಶೇಷವಾಗಿ ಉತ್ಪಾದನೆ ಮಾಡಿದ್ರೆ ಮಾತ್ರ ಕೃಷಿ ಕ್ಷೇತ್ರದಲ್ಲಿ ಲಾಭ ಪಡೆಯಲು ಸಾಧ್ಯ ಅಂತಾ ಬಸವರಾಜ್ ಪಾಟೀಲ್​ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...