alex Certify ಕರಾವಳಿಯಲ್ಲಿ ತೌಕ್ತೆ ಆರ್ಭಟ: ಸಮುದ್ರ ಪಾಲಾದ ಮನೆ, ರುದ್ರಭೂಮಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರಾವಳಿಯಲ್ಲಿ ತೌಕ್ತೆ ಆರ್ಭಟ: ಸಮುದ್ರ ಪಾಲಾದ ಮನೆ, ರುದ್ರಭೂಮಿ…!

ವರ್ಷದ ಮೊದಲ ಸೈಕ್ಲೋನ್ ತೌಕ್ತೆ ಕರಾವಳಿ ಭಾಗದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೌಕ್ತೆ ಆರ್ಭಟ ಜೋರಾಗಿದ್ದು‌, ಹಲವು ಕಟ್ಟಡಗಳು, ಮನೆಗಳು ಹಾಗೂ ಅಂಗಡಿಗಳು ಧರಾಶಾಹಿಯಾಗಿವೆ.

ಸೋಮೇಶ್ವರ, ಸಸಿ ಹಿತ್ಲು, ಬೈಕಂಪಾಡಿ, ಉಳ್ಳಾಲ ಭಾಗದಲ್ಲಿ ಸೈಕ್ಲೋನ್​ ಎಫೆಕ್ಟ್ ಜೋರಾಗಿದೆ. ಅರಬ್ಬಿ ಸಮುದ್ರದ ರೌದ್ರಾವತಾರ ಕಂಡು ಜನತೆ ಬೆಚ್ಚಿ ಬಿದ್ದಿದ್ದಾರೆ. ಅಲೆಗಳ ಅಬ್ಬರಕ್ಕೆ ಅರಬ್ಬಿ ಸಮುದ್ರ ತೀರದಲ್ಲಿದ್ದ ಅಂಗಡಿ ಕುಸಿದು ಬಿದ್ದಿದ್ದು ವಿಡಿಯೋ ವೈರಲ್​ ಆಗಿದೆ.

ಇನ್ನು ಮಂಗಳೂರು ಹೊರವಲಯದ ಸೋಮೇಶ್ವರ ಕಡಲತೀರದಲ್ಲಿದ್ದ ಸ್ಮಶಾನವು ನೋಡನೋಡುತ್ತಿದ್ದಂತೆಯೇ ಸಮುದ್ರದ ಪಾಲಾಗಿದೆ. ಅಲೆಗಳು ರಭಸದಿಂದ ದಡಕ್ಕೆ ಬಂದಪ್ಪಳಿಸುತ್ತಿದ್ದು ಈ ಆರ್ಭಟದಿಂದಾಗಿ ಹಿಂದೂ ರುದ್ರಭೂಮಿ ಸಂಪೂರ್ಣ ನೆಲಕಚ್ಚಿದೆ.

ನಿನ್ನೆಯಷ್ಟೇ ಸಮುದ್ರದ ಅಲೆಯ ರಭಸಕ್ಕೆ ಸ್ಮಶಾನದ ತಡೆಗೋಡೆ ಕುಸಿದು ಹೋಗಿತ್ತು. ಇದೀಗ ಸಂಪೂರ್ಣ ರುದ್ರಭೂಮಿ ಕಟ್ಟಡವೇ ಧರಾಶಾಹಿಯಾಗಿದೆ. ಸ್ಥಳೀಯರ ಮೊಬೈಲ್​ ಕ್ಯಾಮರಾದಲ್ಲಿ ವಿಡಿಯೋ ಸೆರೆಯಾಗಿದೆ.

ಇತ್ತ ಕೇರಳದ ಕಾಸರಗೋಡಿನಲ್ಲಿಯೂ ಮನೆಯೊಂದು ನೆಲಸಮವಾಗಿದೆ. ಉಪ್ಪಳದ ಮೌಸೋದಿ ತೀರ ಪ್ರದೇಶದಲ್ಲಿದ್ದ ಮೂಸ ಎಂಬವರಿಗೆ ಸೇರಿದ್ದ ಮನೆ ಇದಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...