alex Certify ಇಡೀ ದೇಶದ ಮನ ಕಲಕುವಂತಿದೆ ಲಾಕ್ ಡೌನ್ ವೇಳೆಯಲ್ಲೇ ನಡೆದ ಹೃದಯವಿದ್ರಾವಕ ಘಟನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡೀ ದೇಶದ ಮನ ಕಲಕುವಂತಿದೆ ಲಾಕ್ ಡೌನ್ ವೇಳೆಯಲ್ಲೇ ನಡೆದ ಹೃದಯವಿದ್ರಾವಕ ಘಟನೆ

ಗುರುಗ್ರಾಮ್: ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಕಂಗಾಲಾದ ವ್ಯಕ್ತಿ ಹಣಕ್ಕಾಗಿ ಮೊಬೈಲ್ ಮಾರಿ ಮನೆಗೆ ದಿನಸಿ ತಂದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

35 ವರ್ಷದ ಚಾಬು ಮಂಡಲ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ತಂದೆ –ತಾಯಿ, ಪತ್ನಿ ಹಾಗೂ 5 ತಿಂಗಳ ಮಗು ಸೇರಿ ನಾಲ್ವರು ಮಕ್ಕಳೊಂದಿಗೆ ಗುಡಿಸಿನಲ್ಲಿ ವಾಸವಾಗಿದ್ದ ಚಾಬು ಮಂಡಲ್ ಕುಟುಂಬ ಲಾಕ್ ಡೌನ್ ನಿಂದಾಗಿ  ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.

ಲಾಕ್ಡೌನ್ ಜಾರಿಯಾಗಿದ್ದರಿಂದ ಚಾಬುಮಂಡಲ್ ಕುಟುಂಬ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದ ಚಾಬು ಮಂಡಲ್ 2500 ರೂಪಾಯಿಗೆ ತನ್ನ ಬಳಿ ಇದ್ದ ಮೊಬೈಲ್ ಮಾರಿದ್ದಾರೆ. ಆದ್ದರಿಂದ ಒಂದು ಫ್ಯಾನ್, ದಿನಸಿ ಸಾಮಗ್ರಿ ಖರೀದಿಸಿ ಮನೆಗೆ ತಂದಿದ್ದಾರೆ. ನಂತರ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಲಾಕ್ ಡೌನ್ ಜಾರಿಯಾಗಿದ್ದರಿಂದ ಕಾರ್ಮಿಕರು, ಬಡವರು ದುಡಿಮೆ ಇಲ್ಲದೇ ಅನ್ನಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಹೊತ್ತಲ್ಲೇ ಚಾಬುಮಂಡಲ್ ಕೆಲಸ, ದುಡಿಮೆ ಇಲ್ಲದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...