alex Certify Shocking News: ಭಾವಿ ಪತ್ನಿಯಿಂದಲೇ ನಡೆಯಿತು ಘೋರ ಕೃತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಭಾವಿ ಪತ್ನಿಯಿಂದಲೇ ನಡೆಯಿತು ಘೋರ ಕೃತ್ಯ

ರಾಯಚೂರು: ನಾಳೆ ಅದ್ದೂರಿ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಆದರೆ ಅಷ್ಟರಲ್ಲಿ ಯುವತಿಯೊಬ್ಬಳು ತಾನು ಮದುವೆಯಾಗಬೇಕಿದ್ದ ಭಾವಿ ಪತಿಯ ಉಸಿರನ್ನೇ ನಿಲ್ಲಿಸಿಬಿಟ್ಟಿದ್ದಾಳೆ.

ಯುವತಿ ತನ್ನ ಪ್ರಿಯಕರನ ಜೊತೆ ಸೇರಿ ಭಾವಿ ಪತಿಯನ್ನು ಬರ್ಬರವಾಗಿ ಹತ್ಯೆಗೈದು, ಶವವನ್ನು ಹೊಲದಲ್ಲಿ ಹೂತಿಟ್ಟಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ರೋಡಲಬಂಡ ಗ್ರಾಮದಲ್ಲಿ ನಡೆದಿದೆ.

ಡಿ.3ರಂದು ಸಿರಿವಾರ ಪಟ್ಟಣದ ನಿವಾಸಿ ಮಹಬೂಬ್ ಎಂಬಾತನ ಜೊತೆ ಖಾಜಾಬಿ ಎಂಬ ಯುವತಿ ವಿವಾಹ ನಿಶ್ಚಯವಾಗಿತ್ತು. ಆದರೆ ಯುವತಿ ಅದೇ ಗ್ರಾಮದ ಶಬ್ಬೀರ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ತನ್ನ ಪ್ರೀತಿಗೆ ಅಡ್ಡಿಯಾಗುತ್ತೆ ಎಂದು ಶಬ್ಬೀರ್ ಜೊತೆ ಸೇರಿ ಖಾಜಾಬಿ ಮಹಬೂಬ್ ನನ್ನು ಹತ್ಯೆಗೈದು ಹೊಲದಲ್ಲಿ ಹೂತಿಟ್ಟು ಇಬ್ಬರೂ ಪರಾರಿಯಾಗಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆರೋಪಿ ಯುವತಿ ಹಾಗೂ ಆಕೆಯ ಪ್ರಿಯತಮ ಶಬ್ಬೀರ್ ನನ್ನು ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...