alex Certify ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಸಿಡಿಯುತ್ತಾ ಕೊರೋನಾ ಬಾಂಬ್…? ಆತಂಕ ಮೂಡಿಸಿದೆ 9 ಮಂದಿ ರಿಪೋರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಸಿರು ವಲಯದಲ್ಲಿದ್ದ ಶಿವಮೊಗ್ಗದಲ್ಲಿ ಸಿಡಿಯುತ್ತಾ ಕೊರೋನಾ ಬಾಂಬ್…? ಆತಂಕ ಮೂಡಿಸಿದೆ 9 ಮಂದಿ ರಿಪೋರ್ಟ್

ಗ್ರೀನ್ ಜೋನ್ ನಲ್ಲಿರುವ ಶಿವಮೊಗ್ಗದಲ್ಲಿ ಕೊರೋನಾ ಬಾಂಬ್ ಸಿಡಿಯುತ್ತದೆಯೇ ಎಂಬ ಆತಂಕ ಶುರುವಾಗಿದೆ. ಒಂದೇ ಒಂದು ಕೊರೋನಾ ಪಾಸಿಟಿವ್ ಇಲ್ಲದ ಶಿವಮೊಗ್ಗ ಜಿಲ್ಲೆಗೆ ಕೋರೋನಾ ಭೀತಿ ಶುರುವಾಗಿದೆ. ಇಷ್ಟು ದಿನ ನೆಮ್ಮದಿಯಾಗಿದ್ದ ಮಲೆನಾಡಿನ ಜನರಲ್ಲಿ ಆತಂಕ ಮೂಡಿದೆ ಎನ್ನಲಾಗಿದೆ.

ಶಿವಮೊಗ್ಗದಲ್ಲಿ ಇಂದು 9 ಕೊರೋನಾ ಪಾಸಿಟಿವ್ ಬರುವ ಶಂಕೆ ವ್ಯಕ್ತವಾಗಿದೆ. ಅಹಮದಾಬಾದ್ ನಿಂದ ಶಿವಮೊಗ್ಗಕ್ಕೆ ಬಂದಿದ್ದ 9 ಮಂದಿಗೆ ಕೋರೋನಾ ಇರುವ ಶಂಕೆ ವ್ಯಕ್ತವಾಗಿದೆ. ತಬ್ಲಿಘ್ ಜಮಾತ್ ನಲ್ಲಿ ಭಾಗವಹಿಸಿದ್ದ 9 ಮಂದಿ ಅಲ್ಲಿಂದ ಗುಜರಾತ್ ಗೆ ತೆರಳಿ ಗುಜರಾತಿನಿಂದ ನಿನ್ನೆ ಶಿವಮೊಗ್ಗಕ್ಕೆ ಆಗಮಿಸಿದ್ದು ಅವರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ.

ಇಂದು ವರದಿ ಬರಲಿದ್ದು ಏನಾಗುತ್ತೋ ಏನೋ ಎನ್ನುವ ಟೆನ್ಶನ್ ಶುರುವಾಗಿದೆ. ಸದ್ಯ ಈ 9 ಜನರನ್ನು ಶಿವಮೊಗ್ಗದ ಹಾಸ್ಟೆಲ್ನಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮಕೈಗೊಂಡಿದ್ದು, ಅಧಿಕಾರಿಗಳ ಸಭೆ ನಡೆಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...