alex Certify ಒಳ್ಳೆ ಬೀಜ ಬಿತ್ತಿದ್ದೇನೆ; ಫಲವನ್ನು ನಾನೊಬ್ಬನೇ ತಿನ್ನಲ್ಲ ಎಂದ ರೇಣುಕಾಚಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಳ್ಳೆ ಬೀಜ ಬಿತ್ತಿದ್ದೇನೆ; ಫಲವನ್ನು ನಾನೊಬ್ಬನೇ ತಿನ್ನಲ್ಲ ಎಂದ ರೇಣುಕಾಚಾರ್ಯ

ನವದೆಹಲಿ: ನಾನು ಯಾವುದೇ ಸಿಡಿ ತೆಗೆದುಕೊಂಡು ದೆಹಲಿಗೆ ಬಂದಿಲ್ಲ. ನಾನು ಅಸಮಾಧಾನಿತ ಶಾಸಕನೂ ಅಲ್ಲ. ಸಿಡಿ ವಿಚಾರ ನನಗೆ ಗೊತ್ತಿಲ್ಲ. ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ನನಗೆ ನೋವಾಗಿದೆ. ಆ ನೋವನ್ನು ವರಿಷ್ಠರ ಬಳಿ ತೋಡಿಕೊಂಡಿದ್ದೇನೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿದ ರೇಣುಕಾಚಾರ್ಯ, ಒಳ್ಳೆಯ ಬೀಜ ಬಿತ್ತಿದ್ದೇನೆ. ಫಲವನ್ನು ನಾನೊಬ್ಬನೇ ತಿನ್ನಲ್ಲ. ದೆಹಲಿಯಲ್ಲಿ ಸಂಘಟನೆ ನಾಯಕರನ್ನು ಭೇಟಿಯಾಗಿದ್ದೇನೆ. ಆದರೆ ಯಾರನ್ನು ಭೇಟಿಯಾಗಿದ್ದೇನೆ ಎಂದು ಬಹಿರಂಗಪಡಿಸಲ್ಲ ಎಂದು ಹೇಳಿದರು.

ಸಂಪುಟದಲ್ಲಿ ಸೋತವರಿಗೆ ಸ್ಥಾನ ನೀಡಲಾಗಿದೆ. ಯೋಗೀಶ್ವರ್ ಗೆ ಸ್ಥಾನ ನೀಡದಂತೆ ಹೇಳಿದ್ದೆವು. ಅವರು ಅನಿತಾ ಕುಮಾರಸ್ವಾಮಿ ವಿರುದ್ಧವೂ ಗೆದ್ದಿಲ್ಲ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೂ ಗೆದ್ದಿಲ್ಲ. ಆದರೂ ಅವರಿಗೆ ಸ್ಥಾನ ನೀಡಿರುವುದು ಸರಿಯಲ್ಲ. ಯೋಗೇಶ್ವರ್ ರಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ. ಈ ಮಾತನ್ನು ನಾವು ಒಪ್ಪಲ್ಲ. ಸಚಿವ ಸ್ಥಾನದಿಂದ ಯೇಗೇಶ್ವರ್ ಅವರನ್ನು ಕೆಳಗಿಳಿಸಿ ಎಂದು ನಾವು ಹೇಳಲ್ಲ. ಪಕ್ಷದ ಚೌಕಟ್ಟಿನಲ್ಲಿ ನಮ್ಮ ಅಭಿಪ್ರಾಯ ತಿಳಿಸಿದ್ದೇವೆ ಎಂದು ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...