ಶಿವಮೊಗ್ಗ: ನಗರದ ಗಾರ್ಡನ್ ಏರಿಯಾದಲ್ಲಿರುವ ಸ್ನೇಹಮಯಿ ಕನ್ನಡ ಸಂಘದ ವತಿಯಿಂದ ಸಂಘದ ಕಚೇರಿಯಲ್ಲಿ ನಟ ಡಾ. ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು.
ದೇಶಾದ್ಯಂತ ಕೋರೋನಾ ಸೋಂಕು ತಡೆಗೆ ಲಾಕ್ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಅದ್ದೂರಿ ಆಚರಣೆಗೆ ಅವಕಾಶವಿಲ್ಲದ ಕಾರಣ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಯಿತು. ಸಂಘದ ಅಧ್ಯಕ್ಷ ಚಿನ್ನಪ್ಪ, ವಿಜಯಕುಮಾರ್, ರವಿಕುಮಾರ್ ಭಾಗವಹಿಸಿದ್ದರು.
ಅದೇ ರೀತಿ ಶಿವಮೊಗ್ಗದ ಜಯ ಕರ್ನಾಟಕ ಜಿಲ್ಲಾ ಕಚೇರಿಯಲ್ಲಿ ಡಾ. ರಾಜ್ ಕುಮಾರ್ ಜನ್ಮದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ರಾಜ್ ಕುಮಾರ್ ಅವರ ಅಭಿನಯ, ಗೋಕಾಕ್ ಚಳವಳಿ, ಮಾದರಿಯಾದ ಪಾತ್ರಗಳು ಮೊದಲಾದ ವಿಚಾರ, ಸೇವೆಯನ್ನು ಸ್ಮರಿಸಿದ್ದಾರೆ.