ರಾಜ್ಯದಲ್ಲಿ ಲಾಕ್ಡೌನ್ ನಿರ್ಬಂಧ ತೆರವುಗೊಳಿಸಿದ್ದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ಇದೇ ವೇಳೆ ಬಸ್ ಸಂಚಾರವು ಆರಂಭವಾಗಿದೆ. ಅಂತರ ಜಿಲ್ಲಾ ಸಂಚಾರಕ್ಕೆ ಪಾಸ್ ಅಗತ್ಯವಿಲ್ಲ ಎಂದು ಹೇಳಲಾಗಿದೆ.
ಜಿಲ್ಲೆಗಳ ಒಳಗೆ ಸಂಚರಿಸುತ್ತಿದ್ದ ಬಸ್ ಗಳು ಇಂದಿನಿಂದ ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿಯೂ ಸಂಚರಿಸಲಿವೆ. ಇಂದಿನಿಂದ ಜಿಲ್ಲೆಗಳ ನಡುವೆ ಬಸ್ ಸಂಚಾರ ಆರಂಭವಾಗಿದ್ದು, ಇದರೊಂದಿಗೆ ನಗರ ಸಾರಿಗೆ, ಗ್ರಾಮಾಂತರ ಸಾರಿಗೆ ಬಸ್ ಸಂಚಾರ ಆರಂಭವಾಗಿದೆ.
ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯ ನಿಯಮಗಳನ್ನು ಅನುಸರಿಸುವ ಮೂಲಕ ಪ್ರಯಾಣಿಸಬಹುದಾಗಿದೆ. ಅಂತರ್ ಜಿಲ್ಲಾ ಸಂಚಾರಕ್ಕೆ ಪಾಸ್ ಬೇಕಿಲ್ಲ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಪ್ರಯಾಣಿಸಲು ಇದುವರೆಗೆ ಇ -ಪಾಸ್ ವ್ಯವಸ್ಥೆ ಇದ್ದು ಅದನ್ನು ರದ್ದು ಮಾಡಲಾಗಿದೆ. ಇನ್ನು ಮುಂದೆ ಪಾಸ್ ಇಲ್ಲದೆಯೂ ಹೊರ ಜಿಲ್ಲೆಗಳಿಗೆ ಹೋಗಬಹುದು. ಅಲ್ಲದೆ ಹೊರ ಜಿಲ್ಲೆಗೆ ಹೋದವರ 14 ದಿನಗಳ ಕ್ವಾರಂಟೈನ್ ಕೂಡ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.