alex Certify ಧರ್ಮ ಸಂದೇಶ ನೀಡುವುದನ್ನು ಬಿಟ್ಟು ಈ ಪಾದ್ರಿ ಮಾಡಿದ್ದೇನು ಗೊತ್ತಾ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಧರ್ಮ ಸಂದೇಶ ನೀಡುವುದನ್ನು ಬಿಟ್ಟು ಈ ಪಾದ್ರಿ ಮಾಡಿದ್ದೇನು ಗೊತ್ತಾ…?

ಬಳ್ಳಾರಿ: ಚರ್ಚ್ ನಲ್ಲಿ ಧರ್ಮ ಸಂದೇಶ ನೀಡಬೇಕಿದ್ದ ಪಾದ್ರಿಯೊಬ್ಬ ಚರ್ಚ್ ಗೆ ಬಂದಿದ್ದ ಯುವತಿಯನ್ನು ಪುಸಲಾಯಿಸಿ, ಪ್ರೀತಿಯ ನಾಟಕವಾಡಿ ಆಕೆಯ ಜೊತೆ ಪರಾರಿಯಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

54 ವರ್ಷದ ಪಾದ್ರಿ ರವಿಕುಮಾರ್ ಇದೀಗ 24 ವರ್ಷದ ಯುವತಿಯೊಂದಿಗೆ ಎಸ್ಕೇಪ್ ಆಗಿದ್ದಾನೆ. ಹೋಂಡಾ ಶೋರೂಂ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಯುವತಿ, ಆಗಾಗ ಚರ್ಚ್ ಗೆ ಹೋಗುತ್ತಿದ್ದಳು. ಚರ್ಚ್‌ ಗೆ ಬರುತ್ತಿದ್ದ ಯುವತಿಯೊಂದಿಗೆ ಸ್ನೇಹ-ಸಲುಗೆ ಬೆಳೆದು ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ಎಸ್ಕೇಪಾಗಿದ್ದಾನೆ ಎನ್ನಲಾಗಿದೆ.

ಮಗಳನ್ನು ಹುಡುಕಿಕೊಡುವಂತೆ ಯುವತಿ ಪೋಷಕರು ಇದೀಗ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪಾದ್ರಿ ವಿರುದ್ಧ ಹಲವು ಆರೋಪ ಕೇಳಿಬಂದಿದ್ದು, ಚರ್ಚ್ ಗೆ ಬರುತ್ತಿದ್ದ ಅನೇಕ ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಎಂಬ ದೂರು ಕೂಡ ಕೇಳಿಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...