ಶಿವಮೊಗ್ಗ: ಜಿಲ್ಲೆಯಲ್ಲಿ ಪಾಸ್ ಇಲ್ಲದೆ ಪ್ರವೇಶಿಸಿದ ಐವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಹಳ್ಳಿಬೈಲ್ ಗ್ರಾಮದ ವ್ಯಕ್ತಿ ಹಾಗೂ ಶಿವಮೊಗ್ಗ ತುಂಗಾ ನಗರದ ನಾಲ್ವರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಕೊರೊನಾ ಸೋಂಕು ತಡೆಗೆ ಲಾಕ್ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಹೊರರಾಜ್ಯಗಳಿಂದ ಕಳ್ಳ ಮಾರ್ಗದಲ್ಲಿ ಪಾಸ್ ಇಲ್ಲದೇ ಬಂದ ಐವರ ವಿರುದ್ಧ ಕಲಂ 51(ಬಿ) ಎನ್.ಡಿಎಂ.ಎ. ಅನ್ವಯ ಪ್ರಕರಣ ದಾಖಲಿಸಲಾಗಿದೆ. ಲಾಕ್ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಂತರ ಜಿಲ್ಲೆ ಮತ್ತು ರಾಜ್ಯ ಪ್ರವೇಶಕ್ಕೆ ಪಾಸ್ ಪಡೆಯುವುದನ್ನು ಕಡ್ಡಾಯಗೊಳಿಸಿತ್ತು.
ಹಳ್ಳಿಬೈಲ್ ಗ್ರಾಮದ ವ್ಯಕ್ತಿ ಮಹಾರಾಷ್ಟ್ರ ಮತ್ತು ತುಂಗಾ ನಗರ ನಿವಾಸಿಗಳು ತಮಿಳುನಾಡಿನಿಂದ ಆಗಮಿಸಿದ್ದು, ಈ 5 ಮಂದಿ ಪಾಸ್ ಇಲ್ಲದೆ ಜಿಲ್ಲೆಗೆ ಪ್ರವೇಶಿಸಿದ್ದು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.