alex Certify ಬೆಂಗಳೂರು ಕಲಾವಿದನಿಂದ ಬಾಲಿವುಡ್ ದಿಗ್ಗಜರಿಗೆ ವಿಶಿಷ್ಟ ಗೌರವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರು ಕಲಾವಿದನಿಂದ ಬಾಲಿವುಡ್ ದಿಗ್ಗಜರಿಗೆ ವಿಶಿಷ್ಟ ಗೌರವ

ಬೆಂಗಳೂರು: ಕಲೆ ಎಂದರೆ ಹಾಗೇ, ಅದಕ್ಕೆ ಬೆಲೆ ಕಟ್ಟಲಾಗದು. ಆ ಕಲಾವಿದನೂ ಹಾಗೆ ಬೇಕು ಬೇಕೆಂದವರಿಗೆ ಕಲಾ ಪ್ರದರ್ಶನ ಮಾಡುವವರೂ ಅಲ್ಲ. ಇಲ್ಲೊಬ್ಬ ಕಲಾವಿದ ಇಬ್ಬರು ಶ್ರೇಷ್ಠ ಹಾಗೂ ದಂತಕತೆಗಳಾದ ಕಲಾವಿದರಿಬ್ಬರಿಗೆ ಕಲಾ ಗೌರವ ಸಮರ್ಪಿಸಿದ್ದಾರೆ. ಆ ಕಲೆಯ ಫೋಟೋ ಈಗ ವೈರಲ್ ಆಗಿದೆ.

ಕೆಲವೇ ದಿನಗಳ ಹಿಂದಷ್ಟೇ ಕೇವಲ 24 ಗಂಟೆಯೊಳಗಾಗಿ ಒಬ್ಬರಾದ ಮೇಲೊಬ್ಬರಂತೆ ಇಹಲೋಕ ತ್ಯಜಿಸಿದ ಖ್ಯಾತ ಬಾಲಿವುಡ್ ನಟರಾದ ಇರ್ಫಾನ್ ಖಾನ್ ಹಾಗೂ ರಿಷಿ ಕಪೂರ್ ಅವರಿಗೆ ಬೆಂಗಳೂರಿನ ಬಾದಲ್ ನಂಜುಂಡಸ್ವಾಮಿ ಸಲ್ಲಿಸಿದ ಕಲಾ ನಮನ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಈ ಫೋಟೋವನ್ನು ಗಮನಿಸಿದರೆ ಕಲಾವಿದ ಒಂದು ಪೇಪರ್ ನಲ್ಲಿ ರಿಷಿ ಕಪೂರ್ ಚಿತ್ರ ಬಿಡಿಸಿ ಫೋಲ್ಡ್ ಮಾಡಿ ಇಟ್ಟಿದ್ದಾರೆ. ಅದನ್ನು ಎಡಬದಿಯಿಂದ ನೋಡಿದರೆ ರಿಷಿ ಹಾಗೂ ಬಲಬದಿಯಿಂದ ನೋಡಿದರೆ ಇರ್ಫಾನ್ ಖಾನ್ ಕಾಣುತ್ತಾರೆ.

ಎಂಥ ಅದ್ಭುತ ಕಲೆ ಎಂದು ಈಗ ಎಲ್ಲರೂ ಕೊಂಡಾಡುತ್ತಿದ್ದಾರೆ. ಈ ವಿಡಿಯೋ ಕ್ಲಿಪ್ ಈಗಾಗಲೇ 3,400ಕ್ಕೂ ಹೆಚ್ಚು ವೀಕ್ಷಣೆ ಕಂಡಿದ್ದರೆ, ಫೇಸ್ ಬುಕ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...