ಬೆಂಗಳೂರು:ನೇಕಾರರಿಗೆ ಬಂಪರ್ ಕೊಡುಗೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತ ಸಮ್ಮಾನ್ ಯೋಜನೆ ಮಾದರಿಯಲ್ಲೇ ನೇಕಾರ ಸಮ್ಮಾನ್ ಯೋಜನೆಯನ್ನು ಪ್ರಕಟಿಸಿದ್ದಾರೆ.
ರಾಜ್ಯದ 54 ಸಾವೊರ ಕೈಮಗ್ಗ ನೇಕಾರರಿಗೆ ಪ್ರತಿವರ್ಷ ಎರಡು ಸಾವಿರ ರೂಪಾಯಿ ಪರಿಹಾರವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು. ನೇಕಾರರ ಸಾಲ ಮನ್ನಾಕ್ಕೆ 109 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೋಷಿಸಿದ್ದಾರೆ.
ಕಳೆದ 2019 -20 ನೇ ಸಾಲಿನಲ್ಲಿ 29 ಕೋಟಿ ರೂಪಾಯಿ ನೀಡಿದ್ದು, ಉಳಿದ 80 ಕೋಟಿ ರೂಪಾಯಿಗಳನ್ನು ತಕ್ಷಣವೇ ಬಿಡುಗಡೆ ಮಾಡಲಾಗುವುದು. ಇದರೊಂದಿಗೆ ನೇಕಾರರಿಗೆ ಹೊಸ ಸಾಲ ಸೌಲಭ್ಯ ಕಲ್ಪಿಸಲಾಗುವುದು. 2019 ರ ಜನವರಿ 1ರಿಂದ ಮಾರ್ಚ್ 31ರವರೆಗೆ ಸಾಲ ಪಾವತಿಸಿದವರಿಗೆ ಮರುಪಾವತಿ ನೆರವು ನೀಡಲಾಗುವುದು.