alex Certify ಲಾಕ್​ ಡೌನ್​ ವಿಸ್ತರಣೆ ಬಹುತೇಕ ಪಕ್ಕಾ: ಸಚಿವ ಡಾ. ಕೆ. ಸುಧಾಕರ್​ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್​ ಡೌನ್​ ವಿಸ್ತರಣೆ ಬಹುತೇಕ ಪಕ್ಕಾ: ಸಚಿವ ಡಾ. ಕೆ. ಸುಧಾಕರ್​ ಮಹತ್ವದ ಹೇಳಿಕೆ

ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಜಾರಿಗೆ ತರಲಾದ ಲಾಕ್​ಡೌನ್​​ ಅವಧಿ ಪೂರ್ಣಗೊಳ್ಳಲು ಇನ್ನೇನು ಕೇವಲ ಎರಡು ದಿನ ಮಾತ್ರ ಬಾಕಿ ಉಳಿದಿದೆ. ಆದರೆ ರಾಜ್ಯದಲ್ಲಿ ಕೋವಿಡ್​ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಲಾಕ್​ಡೌನ್​ ವಿಸ್ತರಣೆ ಮಾಡ್ತಾರಾ ಎಂಬ ಪ್ರಶ್ನೆ ಹರಿದಾಡುತ್ತಿದೆ.

ಇನ್ನು ಈ ವಿಚಾರವಾಗಿ ದಾವಣಗೆರೆಯಲ್ಲಿ ಮಾತನಾಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್​, ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ಸೋಂಕು ಕಡಿಮೆಯಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಲಾಕ್​ಡೌನ್​ ಮುಂದುವರಿಸೋದು ಉತ್ತಮ ಅನ್ನೋದು ಬಹುತೇಕ ಎಲ್ಲ ಸಚಿವರ ಅಭಿಪ್ರಾಯವಾಗಿದೆ. ಸಿಎಂ ಯಡಿಯೂರಪ್ಪಗೂ ಇದೇ ಅನಿಸಿಕೆ ಇದೆ. ಈ ಸಂಬಂಧ 23ನೇ ತಾರೀಖು ಸಿಎಂ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಬಹುತೇಕ ಲಾಕ್​ಡೌನ್​ ವಿಸ್ತರಣೆ ಪಕ್ಕಾ ಎಂದು ಹೇಳಿದ್ರು.

ಇನ್ನು ರಾಜ್ಯದಲ್ಲಿ ಆಮ್ಲಜನಕ ಹಾಗೂ ರೆಮಿಡಿಸಿವರ್​ ಪೂರೈಕೆ ವಿಚಾರವಾಗಿಯೂ ಮಾತನಾಡಿದ ಸಚಿವ ಸುಧಾಕರ್​, ಆಮ್ಲಜನಕ ಹಾಗೂ ರೆಮಿಡಿಸಿವರ್​ಗೆ ನಮ್ಮಲ್ಲಿ ಯಾವುದೇ ಕೊರತೆ ಇಲ್ಲ. ರಾಜ್ಯಕ್ಕೆ 10 ಲಕ್ಷ ರೆಮಿಡಿಸಿವರ್​ ವಯಲ್ಸ್ ಬಂದಿದೆ. ಇದಕ್ಕಾಗಿ ನಾವು ಸದಾನಂದ ಗೌಡರಿಗೆ ಧನ್ಯವಾದ ತಿಳಿಸಲೇಬೇಕು ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...