alex Certify ಮದುವೆ ಮುಂದೂಡಿ ಕರ್ತವ್ಯ ಪ್ರಜ್ಞೆ ಮೆರೆದ DYSP | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆ ಮುಂದೂಡಿ ಕರ್ತವ್ಯ ಪ್ರಜ್ಞೆ ಮೆರೆದ DYSP

ಕೊರೋನಾ ಸೇವೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಮಂಡ್ಯ ಜಿಲ್ಲೆ ಮಳವಳ್ಳಿ ವಿಭಾಗದ ಡಿವೈಎಸ್ಪಿ ಎಂ.ಜೆ. ಪೃಥ್ವಿ ಮತ್ತು ಧಾರವಾಡ ಮೂಲದ ಐ.ಆರ್.ಎಸ್. ಅಧಿಕಾರಿ ದ್ಯಾಮಪ್ಪ ಅವರ ಮದುವೆ ಏಪ್ರಿಲ್ 5 ರಂದು ನಿಗದಿಯಾಗಿತ್ತು.

ಆದರೆ ಕೊರೋನಾ ಸೇವೆ ಹಿನ್ನೆಲೆಯಲ್ಲಿ ಅವರು ತಮ್ಮ ಮದುವೆಯನ್ನು ಮುಂದೂಡಿ ಕರ್ತವ್ಯಪ್ರಜ್ಞೆ ಮೆರೆದಿದ್ದಾರೆ. ಏಪ್ರಿಲ್ 5 ರಂದು ಧಾರವಾಡದ ಬಿ.ಡಿ. ಪಾಟೀಲ್ ಕನ್ವೆನ್ಷನ್ ಹಾಲ್ ನಲ್ಲಿ ಡಿವೈಎಸ್ಪಿ ಪೃಥ್ವಿ ಮತ್ತು ಐ.ಆರ್.ಎಸ್. ಅಧಿಕಾರಿ ದ್ಯಾಮಪ್ಪ ಅವರ ಮದುವೆ ನಿಗದಿಯಾಗಿದ್ದು, ಏಪ್ರಿಲ್ 10 ರಂದು ಮೈಸೂರಿನ ಪೊಲೀಸ್ ಭವನದಲ್ಲಿ ಆರತಕ್ಷತೆ ನಿಗದಿಯಾಗಿತ್ತು.

ಕೊರೋನಾ ಬಿಕ್ಕಟಿನ ಸಂದರ್ಭದಲ್ಲಿ ಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ ಹಾಗೂ ಲಾಕ್ಡೌನ್ ಕಾರಣದಿಂದ ಅವರು ತಮ್ಮ ಮದುವೆ ಮುಂದೂಡಿದ್ದಾರೆ. ಪೃಥ್ವಿ ಮದುವೆ ಮುಂದೂಡಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...