ಬೆಂಗಳೂರು: ಮೇ 17 ರ ಬಳಿಕವೂ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಯುತ್ತದೆಯೇ ಇಲ್ಲವೇ ಎಂಬ ಬಗ್ಗೆ ಚರ್ಚೆ ನಡೆದಿದೆ. ಪ್ರಧಾನಿಯವರೊಂದಿಗೆ ವಿಡಿಯೋ ಸಂವಾದದಲ್ಲಿ ಸಿಎಂ ಯಡಿಯೂರಪ್ಪ ಲಾಕ್ ಡೌನ್ ಕುರಿತಾಗಿ ಅಭಿಪ್ರಾಯ ತಿಳಿಸಿದ್ದಾರೆ.
ಒಂದು ವೇಳೆ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ ಆದರೆ ಅನೇಕ ಸೇವೆ ಇರುವುದಿಲ್ಲ. ಈಗಾಗಲೇ ನೀಡಿರುವ ವಿನಾಯಿತಿಗಳ ಜೊತೆಗೆ ಹಲವು ಸೇವೆಗಳಿಗೆ ನಿರ್ಬಂಧ ಮುಂದುವರೆಯಲಿದೆ.
ಕೆಎಸ್ಸಾರ್ಟಿಸಿ, ಬಿಎಂಟಿಸಿ ಬಸ್ ಗಳು ರಸ್ತೆಗೆ ಇಳಿಯುವ ಸಾಧ್ಯತೆ ಇಲ್ಲ. ಮಾಲ್, ಸಿನಿಮಾ, ಹೋಟೆಲ್ ಮತ್ತಷ್ಟು ದಿನ ಬಂದ್ ಆಗಲಿವೆ. ಆಟೋ, ಟ್ಯಾಕ್ಸಿಗಳ ಸಂಚಾರಕ್ಕೆ ಮತ್ತಷ್ಟು ದಿನ ಬ್ರೇಕ್ ಹಾಕುವ ಸಾಧ್ಯತೆ ಇದೆ. ರೈಲುಗಳ ಸಂಚಾರಕ್ಕೆ ನಿರ್ಬಂಧ ಮುಂದುವರೆಯಲಿದೆ. ವಿಮಾನಯಾನ ಸೇವೆಗೆ ನಿರ್ಬಂಧ ಮುಂದುವರಿಯುವ ಸಾಧ್ಯತೆಯಿದೆ. ಶಾಲಾ-ಕಾಲೇಜುಗಳು ಮತ್ತಷ್ಟು ದಿನ ಓಪನ್ ಆಗುವುದಿಲ್ಲ. ಅದೇ ರೀತಿ ಪ್ರಾರ್ಥನಾಲಯಗಳು, ದೇವಾಲಯಗಳು ಕೂಡ ಮತ್ತಷ್ಟು ದಿನ ತೆರೆಯುವುದಿಲ್ಲ. ಮದುವೆ, ಧಾರ್ಮಿಕ ಕಾರ್ಯಕ್ರಮ ಸಭೆ ಸಮಾರಂಭಗಳಿಗೂ ಬ್ರೇಕ್ ಹಾಕಲಾಗುವುದು. ಅಂತರಾಷ್ಟ್ರೀಯ, ಅಂತರರಾಜ್ಯ ಸಂಚಾರಕ್ಕೆ ನಿರ್ಬಂಧವಿರುತ್ತದೆ ಎನ್ನಲಾಗಿದೆ.