ನವದೆಹಲಿ: ಮೇ 3ರ ನಂತರ ಲಾಕ್ ಡೌನ್ ತೆರವಾಗಿ ರಿಲೀಫ್ ಸಿಗುವುದು ಬಹುತೇಕ ಅನುಮಾನವೆನ್ನಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ಕ್ಷೇತ್ರದ ಹಲವು ತಜ್ಞರು ಸಲಹೆ ನೀಡಿದ್ದಾರೆ.
ದೇಶದಲ್ಲಿ ಕೊರೋನಾ ಸೋಂಕು ತಡೆಯುವ ವಿಚಾರದಲ್ಲಿ ಮೇ ತಿಂಗಳು ಅತಿ ಮುಖ್ಯವಾಗಿದೆ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಮೇ ತಿಂಗಳು ಅತಿ ಮುಖ್ಯವಾಗಿದ್ದು, ಮೇಕ್ ಆರ್ ಬ್ರೇಕ್ ಫೈಟ್ ನಡೆಸಬೇಕಿದೆ.
ಮೇ ತಿಂಗಳಲ್ಲಿ ಕೊರೋನಾ ಸೋಂಕು ನಿಯಂತ್ರಣ ಮಾಡಲೇಬೇಕಿದೆ. ಕಂಟೇನ್ಮೆಂಟ್ ಜೋನ್ ಗಳಲ್ಲಿ ಕಠಿಣ ಕ್ರಮಕೈಗೊಳ್ಳಬೇಕು. ವಿಮಾನ, ರೈಲ್ವೆ, ಧಾರ್ಮಿಕ ಕೇಂದ್ರ, ಮಾಲ್ ಗಳಿಗೆ ಅವಕಾಶ ಕೊಡಬಾರದು. ರೆಡ್ ಜೋನ್ ಗಳಲ್ಲಿ ಮತ್ತಷ್ಟು ಕಠಿಣ ಕ್ರಮಕೈಗೊಳ್ಳಬೇಕು. ಜೊತೆಗೆ ಗ್ರೀನ್ ಜೋನ್ ಸಂರಕ್ಷಣೆ ಕೂಡ ಮುಖ್ಯವಾಗಿದೆ ಎಂದು ಕೇಂದ್ರಕ್ಕೆ ತಜ್ಞರು ಸಲಹೆ ನೀಡಿದ್ದಾರೆ.