alex Certify ನಾಳೆಯಿಂದ ಲಾಕ್ ಡೌನ್ ಸಡಿಲ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆಯಿಂದ ಲಾಕ್ ಡೌನ್ ಸಡಿಲ ನಿರೀಕ್ಷೆಯಲ್ಲಿದ್ದವರಿಗೆ ಶಾಕ್

ಬೆಂಗಳೂರು: ಕೊರೋನಾ ಸೋಂಕು ತಡೆಗೆ ಜಾರಿಗೊಳಿಸಿರುವ ಲಾಕ್ ಡೌನ್ ಏಪ್ರಿಲ್ 20 ರ ನಂತರವೂ ಯಥಾಸ್ಥತಿಯಲ್ಲಿ ಮುಂದುವರೆಯಲಿದೆ.

ಏಪ್ರಿಲ್ 20 ರಿಂದ ಲಾಕ್ ಡೌನ್ ಸಡಿಲಿಸಿ ಬೈಕ್ ಸಂಚಾರಕ್ಕೆ ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಆದರೆ. ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಲಾಕ್ಡೌನ್ ಸಡಿಲಿಕೆ ವಾಪಸ್ ಪಡೆದುಕೊಂಡಿದ್ದು ಏಪ್ರಿಲ್ 20 ರ ನಂತರವೂ ಎಂದಿನಂತೆಯೇ ಲಾಕ್ ಡೌನ್ ಕಠಿಣ ನಿರ್ಬಂಧ ಮುಂದುವರಿಯಲಿದೆ. ಘೋಷಿಸಿದ್ದ ಎಲ್ಲಾ ವಿನಾಯಿತಿ ಹಿಂಪಡೆಯಲಾಗಿದೆ.

ಲಾಕ್ ಡೌನ್ ನಿರ್ಬಂಧ ಸಡಿಲಿಕೆಗೆ ಸಾರ್ವಜನಿಕರಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ನಿರ್ಧಾರ ಬದಲಿಸಿದೆ. ಮೇ 3 ರವರೆಗೂ ಲಾಕ್ ಡೌನ್ ಮುಂದುವರಿಸಲಿದ್ದು, ರಾಜ್ಯದಲ್ಲಿ ಅಗತ್ಯ ವಸ್ತು, ಸೇವೆ ಹೊರತುಪಡಿಸಿ ಎಂದಿನಂತೆಯೇ ಲಾಕ್ ಡೌನ್ ನಿರ್ಬಂಧ ಮುಂದುವರೆಯಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...