ಬೆಂಗಳೂರು: ರಾಜ್ಯದಲ್ಲಿ ಸೋಂಕು ಮುಕ್ತ ಪ್ರದೇಶಗಳಿಗೆ ಸರ್ಕಾರ ಲಾಕ್ ಡೌನ್ ನಿರ್ಬಂಧಗಳಿಗೆ ವಿನಾಯಿತಿಯನ್ನು ಮುಂದುವರೆಸಿದೆ.
9 ಜಿಲ್ಲೆಗಳಲ್ಲಿ ಕೈಗಾರಿಕೆ ಚಟುವಟಿಕೆ ಆರಂಭಿಸಲು ಅವಕಾಶ ನೀಡಲಾಗಿದೆ. ಶಿವಮೊಗ್ಗ, ಹಾವೇರಿ, ಕೊಪ್ಪಳ, ಚಾಮರಾಜನಗರ, ಕೋಲಾರ, ಹಾಸನ, ಚಿಕ್ಕಮಗಳೂರು, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಕೇಂದ್ರದ ಕ್ರೋಢೀಕೃತ ಮತ್ತು ಪರಿಷ್ಕೃತ ಮಾರ್ಗಸೂಚಿ ಅನ್ವಯ ಹಲವು ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ನಗರಪಾಲಿಕೆ, ಪುರಸಭೆ ಹೊರಗಿರುವ ಆಹಾರ ಸಂಸ್ಕರಣಾ ಕೈಗಾರಿಕೆಗಳು, ಕಲ್ಲಿದ್ದಲು ಗಣಿ ಮತ್ತು ಖನಿಜ ಉದ್ಯಮಗಳ ಉತ್ಪಾದನೆ, ಸಾಗಣೆ ಸರಬರಾಜು ಕೇಂದ್ರಗಳು, ಪ್ಯಾಕೇಜಿಂಗ್ ಸಾಮಗ್ರಿ ತಯಾರಿಕಾ ಘಟಕಗಳು, ಔಷಧ, ಮಾತ್ರೆ, ವೈದ್ಯಕೀಯ ಸಾಧನ ಪೂರಕ ಸಾಮಗ್ರಿ ಮೊದಲಾದ ವಸ್ತುಗಳ ತಯಾರಿಕೆ ಘಟಕಗಳಿಗೆ ವಿನಾಯಿತಿ ನೀಡಲಾಗಿದೆ. ಜಿಲ್ಲಾ ಕೇಂದ್ರ ಹೊರತಾದ ಗ್ರಾಮೀಣ ಪ್ರದೇಶಗಳಿಗೆ ವಿನಾಯಿತಿ ಇರುತ್ತದೆ ಎಂದು ಹೇಳಲಾಗಿದೆ.