alex Certify ಗುಡ್ ನ್ಯೂಸ್: 1 ಲಕ್ಷ ರೂ.ವರೆಗೆ ಸಹಾಯಧನ – ಉದ್ಯೋಗ, ವಾಹನ ಸೇರಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್ ನ್ಯೂಸ್: 1 ಲಕ್ಷ ರೂ.ವರೆಗೆ ಸಹಾಯಧನ – ಉದ್ಯೋಗ, ವಾಹನ ಸೇರಿ ವಿವಿಧ ಯೋಜನೆಯಡಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ವತಿಯಿಂದ ಸಫಾಯಿ ಕರ್ಮಚಾರಿ /ಮ್ಯಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಅವರ ಅವಲಂಬಿತರಿಗೆ ವಿವಿಧ ಯೋಜನೆಗಳಿಗಾಗಿ ಆಹ್ವಾನಿಸಲಾಗಿದ್ದ ಅರ್ಜಿ ಸಲ್ಲಿಕೆ  ದಿನಾಂಕವನ್ನು ಸೆ. 30 ರವರೆಗೆ ವಿಸ್ತರಿಸಿದೆ.

ಅರ್ಹ ಫಲಾಪೇಕ್ಷಿಗಳು ವೆಬ್ಸೈಟ್ www.ksskdc.in ಗೆ ಭೇಟಿ ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೋರಿದೆ.

ಯೋಜನೆಗಳು:

  1. ಸ್ವಯಂ ಉದ್ಯೋಗ ಯೋಜನೆ

ಅ. ಉದ್ಯಮ ಶೀಲತಾ ಯೋಜನೆ- (ಶೇ.70% ಅಥವಾ ಗರಿಷ್ಠ 1 ಲಕ್ಷ ರೂ. ಸಹಾಯಧನ)

ಆ. ನೇರಸಾಲ (25,000 ರೂ. ಸಹಾಯಧನ ಹಾಗೂ 25,000 ರೂ. ನೇರಸಾಲ ಒಟ್ಟು 50,000 ರೂ.)

 

  1. ಗಂಗಾ ಕಲ್ಯಾಣ ಯೋಜನೆ.

 

  1. ಮೈಕ್ರೋ ಕ್ರೆಡಿಟ್ ಯೋಜನೆ. (ಪ್ರೇರಣಾ ಮಹಿಳಾ ಸಂಘ)

 

  1. ಐರಾವತ ಯೋಜನೆ. ಕಾರು, ಆಟೋ, ಟಿಪ್ಪರ್(ಸರಕುವಾಹನ ಗಳಿಗೆ ಹೆಚ್ಚಿನ ಆದ್ಯತೆ) ನೀಡಲಾಗುವುದು.

 

  1. ಭೂ ಒಡೆತನ ಯೋಜನೆಯಡಿ(ಮಹಿಳಾ ಕೃಷಿ ಕಾರ್ಮಿಕರಿಗೆ) ಸೌಲಭ್ಯ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...