ಬೆಂಗಳೂರು: ಅನ್ಯ ರಾಜ್ಯಕ್ಕೆ ತೆರಳಲು ಶೀಘ್ರವೇ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭವಾಗಲಿದೆ. ಸೇವಾಸಿಂಧು ಇ –ಪಾಸ್ ಹೊಂದಿದ ಹೊರರಾಜ್ಯದವರು ತಮ್ಮ ಊರುಗಳಿಗೆ ತೆರಳಲು ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಿಸಲಾಗುವುದು.
ಇದಕ್ಕಾಗಿ ಸಹಾಯವಾಣಿಗಳನ್ನು ಆರಂಭಿಸಲಾಗಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೆ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭಿಸಲಾಗುವುದು. ಹೊರರಾಜ್ಯದ ಉದ್ಯೋಗಿಗಳು, ವಿದ್ಯಾರ್ಥಿಗಳು, ಪ್ರಯಾಣಿಕರು, ಪ್ರವಾಸಿಗರ ಅನುಕೂಲಕ್ಕಾಗಿ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಸೇವಾ ಸಿಂಧು ಇ –ಪಾಸ್ ಹೊಂದಿದವರು ಪ್ರಯಾಣಿಸಬಹುದಾಗಿದೆ. ಬಸ್ ಹೊರಡುವ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಶೀಘ್ರವೇ ದಿನಾಂಕ ನಿಗದಿಯಾಗಲಿದೆ ಎಂದು ಹೇಳಲಾಗಿದೆ.
ತಮಿಳುನಾಡು, ಪಾಂಡಿಚೇರಿಗೆ ಹೋಗುವ ಪ್ರಯಾಣಿಕರು ಮೊಬೈಲ್ ಸಂಖ್ಯೆ 7760990100, 7760990560, ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಹೋಗುವವರು 7760990561, 7760990532, 7760990955, ಕೇರಳಕ್ಕೆ ತೆರಳುವವರು 7760990287, 77609911988 , 7760990531 ಸಂಪರ್ಕಿಸಬಹುದಾಗಿದೆ ಎನ್ನಲಾಗಿದೆ.