ಬೆಂಗಳೂರು: ಬಸ್ ಪಾಸ್ ಪ್ರಯಾಣದ ಅವಧಿ ಇದ್ದರೂ ಲಾಕ್ಡೌನ್ ಜಾರಿಯಾಗಿದ್ದರಿಂದ ನಷ್ಟವಾಯಿತು ಎಂದುಕೊಂಡ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಸಿಹಿ ಸುದ್ದಿ ನೀಡಿದೆ.
ಲಾಕ್ಡೌನ್ ಮುಗಿದ ಬಳಿಕ ಬಸ್ ಸಂಚಾರ ಪುನರಾರಂಭವಾಗುತ್ತಿದ್ದಂತೆ ಮಾಸಿಕ ಪಾಸ್ ಪಡೆದ ಪ್ರಯಾಣಿಕರಿಗೆ ಬಾಕಿ ಉಳಿದ ದಿನಗಳ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು.
ಬಸ್ ಪಾಸ್ ಪಡೆದುಕೊಂಡ ಪ್ರಯಾಣಿಕರು ಲಾಕ್ ಡೌನ್ ಜಾರಿಯಾದ ಕಾರಣ ತಮ್ಮ ಪಾಸ್ ಅವಧಿ ಮುಗಿದರೂ, ಬಾಕಿ ಉಳಿದ ದಿನಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ್ದು, ಲಾಕ್ಡೌನ್ ಮುಗಿದ ಬಳಿಕ ಬಸ್ ಸೇವೆ ಆರಂಭವಾದ ನಂತರ ಪ್ರಯಾಣಿಕರು ತಮ್ಮ ಪಾಸ್ ಬಳಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.