alex Certify ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿ ಮಠದ ಶ್ರೀಗಳಿಂದ ಕೊರೋನಾ ಕುರಿತು ಅಚ್ಚರಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿ ಮಠದ ಶ್ರೀಗಳಿಂದ ಕೊರೋನಾ ಕುರಿತು ಅಚ್ಚರಿ ಹೇಳಿಕೆ

ಹಾಸನ: ನಿಖರ ಭವಿಷ್ಯಕ್ಕೆ ಹೆಸರಾದ ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಮಹಾಮಾರಿ ಕೋರೋನಾ ಸೋಂಕಿನ ಕುರಿತಾಗಿ ಭವಿಷ್ಯ ನುಡಿದಿದ್ದಾರೆ.

ಕೊರೋನಾ ಸೋಂಕಿನಿಂದ ಭಾರತಕ್ಕೆ ಭಾರೀ ಗಂಡಾಂತರವೇನೂ ಆಗುವುದಿಲ್ಲ. ಕರ್ನಾಟಕಕ್ಕೆ ಕೂಡ ಹೆಚ್ಚಿನ ಸಮಸ್ಯೆ ಆಗುವುದಿಲ್ಲ. ಆದರೆ, ದೊಡ್ಡಣ್ಣ ಎನಿಸಿಕೊಂಡಿರುವ ಅಮೆರಿಕ ಕೊರೋನಾ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೇ ಮುನಿಪುರವೆಲ್ಲ ಕೂಳಾದೀತು ಎಂದು ಹೇಳಿದ್ದು ಮುನಿಣಿಪುರ ಎಂದರೆ ಅಮೆರಿಕ, ಸಿರಿವಂತ ಎಂದರೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ದೇಶಕ್ಕೆ ಕೋರೋನಾದಿಂದ ಗಂಡಾಂತರ ಗ್ಯಾರಂಟಿ ಎಂದು ಹೇಳಲಾಗಿದೆ.

ಯುದ್ಧವಿಲ್ಲದೆ ಜನ ಮಡಿಯುತ್ತಾರೆ. ಮೇ ಅಂತ್ಯದ ವೇಳೆಗೆ ಕೊರೋನಾ ಸಮಸ್ಯೆ ಬಗೆಹರಿಯಬಹುದು. ಕರ್ನಾಟಕಕ್ಕೆ ಹೆಚ್ಚಿನ ಸಮಸ್ಯೆ ಆಗದು ಎಂದು ಶ್ರೀಗಳು ಹೇಳಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...