alex Certify ರಾಜ್ಯದಲ್ಲಿ ಲಸಿಕೆ ಅಭಾವ: ಆತಂಕ ವ್ಯಕ್ತಪಡಿಸಿದ ರಾಜ್ಯ ಹೈಕೋರ್ಟ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿ ಲಸಿಕೆ ಅಭಾವ: ಆತಂಕ ವ್ಯಕ್ತಪಡಿಸಿದ ರಾಜ್ಯ ಹೈಕೋರ್ಟ್​

ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಭೀಕರತೆಯ ನಡುವೆಯೇ ಲಸಿಕೆ ಅಭಾವ ಕೂಡ ಉಂಟಾಗಿದೆ. ರಾಜ್ಯದಲ್ಲಿ ಕೊರೊನಾ ಲಸಿಕೆಗಳ ಅಭಾವದ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎ.ಎಸ್.​ ಓಕಾ ಹಾಗೂ ಅರವಿಂದ್​ ಕುಮಾರ್ ನೇತೃತ್ವದ ಪೀಠ ರಾಜ್ಯದಲ್ಲಿ ಲಸಿಕೆ ಅಭಾವ ಕುರಿತಂತೆ ಆತಂಕ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ 2ನೇ ಡೋಸ್​ ಲಸಿಕೆ ವಿತರಣೆಯಲ್ಲಿ ವಿಳಂಬ ಉಂಟಾಗುತ್ತಿದೆ. 18 ರಿಂದ 44 ವರ್ಷದವರಿಗೆ ಹಾಗಿರಲಿ. ಇನ್ನೂ 45 ವರ್ಷ ಮೇಲ್ಪಟ್ಟವರಿಗೇ 2ನೇ ಡೋಸ್​ ಲಸಿಕೆ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ ಇನ್ನೂ 65 ಲಕ್ಷ ಜನರಿಗೆ ಕೋವಿಡ್​ 2ನೇ ಡೋಸ್​ ಲಸಿಕೆ ಲಭ್ಯವಾಗಿಲ್ಲ. 1.60 ಲಕ್ಷ ಜನರಿಗೆ 8 ವಾರ ಕಳೆದ್ರೂ ಕೊರೊನಾ ಲಸಿಕೆಯ 2ನೇ ಡೋಸ್​ ಸಿಕ್ಕಿಲ್ಲ. 16.63 ಲಕ್ಷ ಜನರಿಗೆ 6 ವಾರಗಳು ಕಳೆದರೂ 2 ಡೋಸ್​ ಲಸಿಕೆಯನ್ನ ನೀಡುವಲ್ಲಿ ರಾಜ್ಯ ಆರೋಗ್ಯ ಇಲಾಖೆ ಅಸಫಲವಾಗಿದೆ. ಒಟ್ಟು 26 ಲಕ್ಷ ಜನಕ್ಕೆ 2ನೇ ಡೋಸ್​ ಲಸಿಕೆಯ ತುರ್ತು ಅಗತ್ಯವಿದೆ ಎಂದು ರಾಜ್ಯ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ವ್ಯಾಕ್ಸಿನೇಷನ್​ ಸಂಬಂಧ ನೀಲನಕ್ಷೆ ರಚಿಸಿ. ವ್ಯಾಕ್ಸಿನ್​ ಕೊರತೆಯ ಸಮಸ್ಯೆ ದೊಡ್ಡ ಆತಂಕ ಸೃಷ್ಟಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ವ್ಯಾಕ್ಸಿನೇಷನ್​​​ ಅಭಿಯಾನವೇ ವಿಫಲವಾಗಲಿದೆ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ.

ಇನ್ನು ಲಾಕ್​ಡೌನ್​ನಿಂದಾಗಿ ಜನರಿಗೆ ಯಾವುದೇ ತೊಂದರೆಯಾಗದಂತೆ ಆಹಾರ ಭದ್ರತೆ ಒದಗಿಸಿ ಎಂದು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ. ಇನ್ನು ಈ ವಿಚಾರವಾಗಿ ರಾಜ್ಯ ಹೈಕೋರ್ಟ್​ಗೆ ಮಾಹಿತಿ ನೀಡಿದ ಎ.ಜೆ. ಪ್ರಭುಲಿಂಗ, ಲಾಕ್​ಡೌನ್​ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್​​ನಲ್ಲಿ ಮೂರು ಹೊತ್ತು ಉಚಿತ ಆಹಾರ ಜೊತೆಗೆ 10 ಕೆಜಿ ಉಚಿತ ಪಡಿತರವನ್ನೂ ನೀಡಲಾಗ್ತಿದೆ ಎಂದು ಮಾಹಿತಿ ನೀಡಿದ್ರು.  ಗ್ರಾಮಾಂತರಕ್ಕೂ ಆಹಾರ ಭದ್ರತೆ ಸಿಗುವಂತೆ ಕ್ರಮ ಕೈಗೊಳ್ಳಿ. ಕಳೆದ ಬಾರಿಯಂತೆ ಈ ವರ್ಷವೂ ಸಹ ದಾಸೋಹ ಹೆಲ್ಪ್​ಲೈನ್​ ಪುನಾರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದೆ. ಇನ್ನು ವಿಚಾರಣೆಯನ್ನ ಹೈಕೋರ್ಟ್ ಮೇ 17ನೇ ತಾರೀಖಿಗೆ ಮುಂದೂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...