ಲಾಕ್ ಡೌನ್ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರ ಕೈಯಲ್ಲಿ ಹಣ ಉಳಿಸುವ ಮಾರ್ಗೋಪಾಯ ಹುಡುಕಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಶಾಲಾ, ಕಾಲೇಜುಗಳ ಶುಲ್ಕ ಕಡಿತ ಮಾಡಬೇಕು. ಅದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿತ ಮಾಡುವ ಜೊತೆಗೆ ವಿದ್ಯುತ್ ಶುಲ್ಕ ಕಡಿತಗೊಳಿಸಬೇಕು. ಬಾಡಿಗೆಗೆ ವಿನಾಯಿತಿ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ದೇಶದ ಜಿಡಿಪಿ ಬೆಳವಣಿಗೆ ದರ ಹಿಂದಿನ ಸ್ಥಿತಿಗೆ ಮರಳಲು ವರ್ಷಗಳೇ ಬೇಕಾಗುತ್ತವೆ. ಈ ಕಾರಣದಿಂದ ಬೆಲೆ ಏರಿಕೆ ಆಗದಂತೆ ನೋಡಿಕೊಳ್ಳಲು ಸರ್ಕಾರಗಳು ಎಚ್ಚರಿಕೆ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಜನರ ಕೈಯಲ್ಲಿ ಹಣ ಉಳಿಸಲು ಪರಿಹಾರ ಕಂಡುಕೊಳ್ಳಬೇಕಿದೆ. ಬಾಡಿಗೆ ವಿನಾಯಿತಿ, ಶಾಲೆ ಶುಲ್ಕ, ವಿದ್ಯುತ್ ದರ ಕಡಿತ, ಇಂಧನ ದರ ಇಳಿಕೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.