alex Certify ನದಿಯಲ್ಲಿ ತೇಲಿ ಬಂದ ಶವದ ಮೇಲಿತ್ತು ಕೆಜಿಗಟ್ಟಲೆ ಚಿನ್ನ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನದಿಯಲ್ಲಿ ತೇಲಿ ಬಂದ ಶವದ ಮೇಲಿತ್ತು ಕೆಜಿಗಟ್ಟಲೆ ಚಿನ್ನ…!

ನದಿಯಲ್ಲಿ ತೇಲಿ ಬಂದ ಶವದ ಮೇಲೆ ಬರೋಬ್ಬರಿ 1.5 ಕೆಜಿ ಚಿನ್ನ ಇರುವುದು ಕಂಡುಬಂದಿದ್ದು, ಇದನ್ನು ನೋಡಿ ಜನ ದಂಗಾಗಿದ್ದಾರೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಈ ಶವ ಕಾಣಿಸಿಕೊಂಡಿದ್ದು, ಮೃತ ವ್ಯಕ್ತಿಯ ಶವದ ಮೇಲೆ 1.5 ಕೆಜಿ ತೂಕ ಇರುವ ಚಿನ್ನದ ಗಟ್ಟಿ ಇತ್ತು ಎಂದು ಹೇಳಲಾಗಿದೆ.

ಮೃತವ್ಯಕ್ತಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ಮೀರಜ್ ತಾಲೂಕಿನ 30 ವರ್ಷದ ಸಾಗರ ಪಾಟೀಲ ಎಂದು ಹೇಳಲಾಗಿದ್ದು, ಶವದ ಮೇಲೆ ಗಾಯದ ಗುರುತು ಕಂಡುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...